ಕಿಶೋರಕುಮಾರರ 94ನೇ ಜನ್ಮ ದಿನಾಚರಣೆ

0
29

ಕಲಬುರಗಿ: ಕಲಾಕಾರ್ ಮೆಲೋಡಿ ಆರ್ಕೆಸ್ಟ್ರಾ ತಂಡದಿಂದ ನಗರದಲ್ಲಿ ಏರ್ಪಡಿಸಿದ್ದ ಕಿಶೋರಕುಮಾರ ಅವರ 94ನೇ ಜನ್ಮ ದಿನಾಚರಣೆ ಸಮಾರಂಭವು ನಗರದ ಎಸ್.ವಿ.ಪಿ. ಸರ್ಕಲ್ ನಲ್ಲಿರುವ ಕನ್ನಡ ಭವನದಲ್ಲಿ ಬಹು ವಿಜೃಂಭಣೆಯಿಂದ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶಿವಕುಮಾರ ಡಿ. ಪವಾರ ನಿರ್ದೇಶಕ ರು, ಸುವರ್ಣ ಫೈನಾನ್ಸಿಯರ್ಸ್, ಗುರುನಾಥ ಎಸ್. ಕೆ.ಎಸ್.ಪಿ.ಎಸ್. ಡೆಪ್ಯೂಟಿ ಕಮಾಂಡೆಂಟ್. ಭವಾನಿಸಿಂಗ್ ಠಾಕೂರ, ರಾಜ್ಯ ಉಪಾಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ, ಎಮ್.ಜಿ. ಘನಾತೆ ಗೌರವಾಧ್ಯಕ್ಷರು, ಎಸ್.ವಿ.ಜಿ.ಕೆ. ಸಂಘ ಆಗಮಿಸಿದ್ದರು.

Contact Your\'s Advertisement; 9902492681

ಕಲಾಕಾರ ತಂಡದ ಗಾಯಕರಾದ ವಾಲ್ಮಿಕ್ ಕಾಂಬಳೆ, ಚಾಂದ ಜಾಕ್ಸನ್, ವಿಠ್ಠಲ ಮೇತ್ರೆ, ಚಂದ್ರಶೇಖರ ರೆಡ್ಡಿ, ರಾಜು ರೆಡ್ಡಿ, ಝಮೀರ್ ಅಹ್ಮದ್, ರಾಜೇಶ ರಾಂಪೂರೆ, ಪಾರ್ವತಿ ಉರ್ಕಿಮಠ, ಶೈಲಜ ಬಿ. ಇವರುಗಳು ಕಿಶೋರ ಕುಮಾರ ಅವರ ಗೀತೆಗಳನ್ನು ಮನದುಂಬಿ ಹಾಡಿ ಗಾನ ನಮನ ಸಲ್ಲಿಸಿದರು. ಮಹಾದೇವ ಅಸ್ಟಗಿಯವರ ಧ್ವನಿವರ್ಧಕದ ಮಾಂತ್ರಿಕತೆಯಿತ್ತು. ಆಕಾಶ ಅವರಿಂದ ಎಲ್.ಇ.ಡಿ. ಸೇವೆ ಮತ್ತು ಅನ್ನಪೂರ್ಣೇಶ್ವರಿ ಕ್ಯಾಟರಸ್9 ಇವರಿಂದ ಅಲ್ಪೋಪಹಾರದ ವ್ಯವಸ್ಥೆಯಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here