ಕಲಬುರಗಿ: ಮಹಾನಗರ ಪಾಲಿಕೆಯ 15ನೇ ಹಣಕಾಸಿನ ಯೋಜನೆಯ ಅಡಿಯಲ್ಲಿ, ಶಾಂತಿನಗರ ಬಡಾವಣೆಯಲ್ಲಿ ತೆರೆದ ಬಾವಿಯ ಪುನಶ್ಚೇತನ ಕಾಮಗಾರಿಗೆ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾದ ಸಚಿನ್ ಶಿರವಾಳ ಅವರು ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಮುಖಂಡರಾದ ಸಂಜೀವ್ ಐರೆಡ್ಡಿ, ಶರಣು ಬೆಳ್ಕೆರಿ, ಶಿವಶರಣ ಕಕ್ಕಳಮೇಲಿ, ಅಶೋಕ ಸ್ವಾಮಿ, ಭಾನುಕುಮಾರ, ಅಶೋಕ ಹವದೇ, ಅಮರ್ ಶಿರವಾಳ, ದಯಾನಂದ ಪಾಟೀಲ್, ಬಿ ಎಸ ಪಾಟೀಲ್, ಅಣ್ಣಾರಾಯ ಸೇರಿದಂತೆ ಬಡಾವಣೆಯ ಮುಖಂಡರು ಇದ್ದರು.