ಶಹಾಬಾದ: ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಬುಧವಾರದಂದು ನಗರಸಭೆ ವತಿಯಿಂದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ನಗರಸಭೆಯ ಪೌರಾಯುಕ್ತೆ ಪಂಕಜಾ ಅವರು ಚಾಲನೆ ನೀಡಿದರು.
ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು, ನಗರಸಭೆಯ ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರು ಗೃಹ ಲಕ್ಷ್ಮಿ ಯೋಜನೆಯ ಚಾಲನಾ ಸಮಾರಂಭದ ನೇರ ಪ್ರಸಾರದ ಕಾರ್ಯಕ್ರಮವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಓ ಬಿ.ಎಸ್.ಹೊಸಮನಿ, ಇಓ ಮಲ್ಲಿನಾಥ ರಾವೂರ, ನಗರಸಭೆಯ ಎಇಇ ಶರಣು ಪೂಜಾರಿ, ಕಂದಾಯ ಅಧಿಕಾರಿ ಸುನೀಲ ವೀರಶೆಟ್ಟಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಸಮುದಾಯ ಸಂಘಟನಾ ಅಧಿಕಾರಿ, ರಘುನಾಥ ನರಸಾಳೆ, ಕಂದಾಯ ನಿರೀಕ್ಷಕರು ಸುರೇಶ,ಕಿರಿಯ ಅಭಿಯಂತರರು ರಬ್ಬಾನಿ,ಜೆಇ ಸೋಮಪೂರೆ, ನೈರ್ಮಲ್ಯ ನಿರೀಕ್ಷಕ ಮೈಹಿನೋದ್ದಿನ್ ಇತರರು ಇದ್ದರು.