ನಿದಿರೆ ಇರದ ಇರಳು ಗಜಲ್ ಸಂಕಲನ ಲೋಕಾರ್ಪಣೆ

0
18

ಶಹಾಬಾದ: ನಿದಿರೆ ಇರದೆ ಇರುಳನ್ನು ನಾವು ಕಳೆಯುತ್ತೇವೆ ಎಂದರೆ ಮನದಲ್ಲಿ ಚಿಂತೆ ಇದೆ ಎಂದರ್ಥ. ಈ ಇರುಳ ಚಿಂತೆಯನ್ನು ಯಾರು ಚಿಂತನವಾಗಿ ಬದಲಾಯಿಸಿಕೊಳ್ಳುತ್ತಾರೋ ಅವರು ನಿದಿರೆ ಇರದ ಇರುಳುಗಳನ್ನು ಸಾರ್ಥಕವಾಗಿ ಕಳೆಯುತ್ತಾರೆ. ಅವರ ಕತ್ತಲ ಚಿಂತನೆಗಳು ಎμÉ್ಟೂೀ ಜನರಿಗೆ ಬೆಳಕಾಗಿ ಬಿಡುತ್ತವೆ ಎಂದು ಹಿರಿಯ ಕಲಾವಿದ ಸಂಜೀವ.ಎಮ್ ಹೇಳಿದರು.

ಅವರು ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಹಮ್ಮಿಕೊಂಡಿದ್ದ ಮಂಡಲಗಿರಿ ಪ್ರಸನ್ನ ಅವರ ರಚಿತ ನಿದಿರೆ ಇರದ ಇರಳು ಗಜಲ್ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಒಬ್ಬರಿಗೆ ಸಾಹಿತ್ಯ ರಚನೆಯ ಹವ್ಯಾಸ ಇರುತ್ತದೆ. ಅಪ್ಪಟ ಕನ್ನಡ ಪ್ರೇಮಿ, ಕಥೆ, ಕವಿತೆ ಬರಿಯುತ್ತಿರುತ್ತಾರೆ. ಆದರೆ ಬದುಕು ನಡೀಬೇಕಲ್ವಾ!? ಅದಕ್ಕೆ ನೌಕರಿಗಾಗಿ ಅದರಲ್ಲಿ ತಲ್ಲೀನರಾಗಿ ಬರವಣಿಗೆಯನ್ನು ಮೊಟಕುಗೊಳಿಸುತ್ತಾರೆ, ಪ್ರಸನ್ನ ಅವರು ವೃತ್ತಿಯನ್ನೇ ಬದಿಗೊತ್ತಿ ಅದರಿಂದ ಮುಕ್ತಿ ಪಡೆದು ಸಾಹಿತ್ಯವನ್ನೇ ಬದುಕಾಗಿಸಿ ಕೊಂಡವರು ಎಂದರು.

ಡಾ. ಮಲ್ಲಿನಾಥ ತಳವಾರ ಮಾತನಾಡಿ, ಮೂಲ ಅರೆಬಿಕ್, ಪರ್ಷಿಯನ್ ಉರ್ದುವಿನಲ್ಲಿನ ಗಜಲ್ ಗಳನ್ನು ಸುಂದರವಾಗಿ, ಮಧುರವಾಗಿ ಹಾಡಲಾಗುತ್ತದೆ, ಮೂಲತ ಇದು ಹಾಡುಗಬ್ಬ. ಹಾಡಲಿಕ್ಕೆ ಬರುವಂತೆಯೇ ಮೂಲ ಗಜಲ್ ಇರಬೇಕಾದ್ದು ಅತ್ಯವಶ್ಯಕ ಎಂದರು.
ಕನ್ನಡ ಕಾವ್ಯಲೋಕಕ್ಕೆ ಕಾಲಿರಿಸಿದ್ದು ಅರಬ್ಬೀ ಮೂಲದ “ ಗಜಲ್ “ ಕಾವ್ಯ ಪ್ರಕಾರ. ಇದೂ ಸಹ ಕನ್ನಡಕ್ಕೆ ಕಾವ್ಯಲೋಕದಲ್ಲಿ ಹೊಸ ಪ್ರಯೋಗವೇ. ಉರ್ದು ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದಿದ್ದ ಖ್ಯಾತ ಕವಿ ಶಾಂತರಸರು ಗಜಲ್ ನ್ನು ಕನ್ನಡಕ್ಕೆ ಒಗ್ಗಿಸಲು ಯತ್ನಿಸಿ ಸಫಲರಾದರು. ಮಂಡಲಗಿರಿ ಪ್ರಸನ್ನ ಅವರ ನಿದಿರೆ ಇರದ ಇರಳು. 61 ಗಜಲ್ಗಳ ಈ ಕೃತಿ. ಬದುಕಿನ ಅನೇಕ ಮಜಲ್ಗಳ ಕನ್ನಡಿ. ಪ್ರೇಮವಿದೆ, ಮೋಹವಿದೆ, ಸರಸವಿದೆ, ವಿರಸವಿದೆ, ವಿರಹದ ನೋವಿನ ಜೊತೆ, ತುಸು ಕ್ರೋಧವೂ ಇದೆ. ಈ ಎಲ್ಲಾ ಲಕ್ಷಣಗಳುಳ್ಳ ಗಜಲ್ಗಳನ್ನು ಓದುತ್ತಾ ಸಾಗಿದರೆ ಕೆಲವಷ್ಟು ಗಜಲ್ ಗಳ ಸಾಲುಗಳು ಮುಂದೆ ಓದುವಾಗಲೂ ಮತ್ತೆ ಮತ್ತೆ ಕಾಡುತ್ತವೆ, ಪುಟ ಹಿಂದೆ ತಿರುಗಿಸಿಕೊಂಡು ಓದಿಸಿಕೊಳ್ಳುತ್ತವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ವಹಿಸಿಕೊಂಡಿದ್ದರು. ಗಜಲ್ ಲೇಖಕಕರಾದ ಮಂಡಲಗಿರಿ ಪ್ರಸನ್ನ ಮಾತನಾಡಿದರು.

ವಾಸುದೇವ ಚಹ್ವಾಣ ಸ್ವಾಗತಿಸಿದರು, ಲೋಹಿತ ಕಟ್ಟಿ ನಿರೂಪಿಸಿದರು, ಮರಲಿಂಗ ಯಾದಗಿರಿ ವಂದಿಸಿದರು. ಈ ಸಂಧರ್ಭದಲ್ಲಿ ಕನಕಪ್ಪ ದಂಡಗುಲಕರ, ಶರಣು ವಸ್ತ್ರದ, ಬಸವರಾಜ ಮದ್ದರಕಿ, ನಿಂಗಪ್ಪ ಹುಳಗೋಳ, ರಾಜಶೇಖರ ದೇವರಮನಿ, ಅನಿಲ ಮೈನಾಳಕರ, ವಿಶ್ವನಾಥ ತೊಟ್ನಳ್ಳಿ, ರವಿ ದಾಚಂಪಲ್ಲಿ, ಖಾಜಾಪಟೇಲ, ಗುರುಪ್ರಸಾದ ಇದ್ದರು.

ಪ್ರೇಮ, ಭಾವ, ವಿರಹ ಇರಬೇಕು ಅದು ಹೇಗಿರಬೇಕೆಂದರೆ ಓದುಗನ, ಕೇಳುಗನ ಮನಸನ್ನು ಕರಗಿಸಬೇಕು, ಗಜಲ್ ನ ಸಾಗರದ ಅಲೆ ಓದುಗನ ಮನದಾಳದ ತೀರವನ್ನು ತಲುಪಿ ಸೆಳೆಯಬೇಕು. ತನ್ನ ಮೃದು ಮಧುರ ಭಾವದಿಂದಲೇ ಸಹೃದಯನ ಕಣ್ಣಂಚಿನಲ್ಲಿ ಒಂದು ಹನಿ ತಂದರೆ, ಹೃದಯ ಅರಿಯದ ನೋವಿನ ಭಾವದಿಂದ ನಲುಗಿದರೆ ಅದು ಗಜಲ್ ನ ಸಾರ್ಥಕತೆ- ಮಂಡಲಗಿರಿ ಪ್ರಸನ್ನ ಗಜಲ್ ಲೇಖಕರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here