ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾಗಿ ಲಚ್ಚಪ್ಪ ಜಮಾದಾರಗೆ ಆಯ್ಕೆಮಾಡಿ

0
25

ಫರತಾಬಾದ: ಕಲ್ಯಾಣ ಕರ್ನಾಟಕದ ಕೋಲಿ ಸಮಾಜದ ನಾಯಕರಾದ ಲಚ್ಚಪ್ಪ ಜಮಾದಾರ ಅವರಿಗೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು. ಎಂದು ಕೋಲಿ ಸಮಾಜದ ಮುಂಖಡರಾದ ಹೊನ್ನಕಿರಣಗಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಬಾಬು ದಸರಾಗೊಳ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಪತ್ರಿಕೆ ಮುಂಖಾತರ ಮನವಿ ಮಾಡಿದ್ದಾರೆ.

ಕೋಲಿ ಸಮಾಜದ ಏಳಿಗೆಗಾಗಿ ಮತ್ತು ಕೋಲಿ ಸಮಾಜವನ್ನು ಜಾಗೃತಿ ಮೂಡಿಸುವಲ್ಲಿ ಹಲವಾರು ವರ್ಷಗಳ ಕಾಲ ಸಮಾಜಕ್ಕಾಗಿ ಹಗಲು ರಾತ್ರಿ ಲೆಕ್ಕಿಸದೆ, ಸಮಾಜವನ್ನು ಕಟ್ಟುವಲ್ಲಿ ಲಚ್ಚಪ್ಪ ಜಮಾದಾರ ಅವರ ಕಾರ್ಯ ನಮ್ಮ ಸಮಾಜಕ್ಕೆ ಬಹಳ ಅವಶ್ಯಕತೆ ಇದೆ. ಈ ಬಾರಿ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 7ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಶಾಸಕರು ಆಗಿದ್ದಾರೆ. ಲಚ್ಚಪ್ಪ ಜಮಾದಾರ ಅವರ ಕೂಗಿಗೆ ಅಫಜಲಪೂರ, ಜೇವರ್ಗಿ, ಚಿತ್ತಾಪುರ,ಸೇಡಂ,ಕಲಬುರಗಿ ಉತ್ತರ ಕೇತ್ರ ಸೇರಿ ಇತರೆ ಕೇತ್ರದಲ್ಲಿ ಕೋಲಿ ಸಮಾಜದ ಮತಬಾಂಧವರು ಕಾಂಗ್ರೆಸ್ ಪಕ್ಷ ಬೆಂಬಲಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ.

Contact Your\'s Advertisement; 9902492681

ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ, ಜಿಪಂ, ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ತರುವಲ್ಲಿ ಪಕ್ಷಪರ ಮತ್ತು ಅಭ್ಯರ್ಥಿಗಳ ಪರ ಕಾರ್ಯ ನಿರ್ವಹಿಸುತ್ತಾರೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸೂಕ್ತವಾಗಿ ಪರಿಗಣಿಸಿ, ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ಹಿಂದುಳಿದ ಕೋಲಿ ಸಮಾಜಕ್ಕೆ ನ್ಯಾಯ ನೀಡಬೇಕು ಎಂದು ಹೊನ್ನಕಿರಣಗಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಕೃಷ್ಣಾಬಾಯಿ ಗಂಡ ಶರಣಪ್ಪ ತತ್ತಿ, ವಿಶ್ವರಾಧ್ಯ ಬೆಳಗುಂಪಿ ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here