ಸೇ.18.ರಂದು ಧರ್ಮ ಸಭೆ

0
9

ಕಲಬುರಗಿ: ಸೇಡಂ ರಸ್ತೆಯಲ್ಲಿರುವ ಶ್ರೀ ಮಹಾತ್ಮ ಬನದೇಶ್ವರ ದೇವಸ್ಥಾನದ 10ನೇ ವರ್ಷದ ಪಲ್ಲಕ್ಕಿ ಉತ್ಸವ ಹಾಗೂ ಶ್ರಾವಣ ಮಾಸದ ರುದ್ರಾಭಿಷೇಕ ಸಮಾರಂಭವನ್ನು ಸೇ. ಬೆಳಗ್ಗೆ 6-00 ಗಂಟೆಗೆ ಶ್ರೀ ಬನದೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಜರುಗುವುದು.

ಬೆಳಗ್ಗೆ 8-00 ಗಂಟೆಯಿಂದ ವಾದ್ಯ, ಪುರವಂತರ ಸೇವೆಯೊಂದಿಗೆ ಗಂಗಾಸ್ಥಳ, ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಸೇ.18.ರಂದು ಸೋಮವಾರ ಬೆಳಗ್ಗೆ 10 ಕ್ಕೆ. ಧರ್ಮ ಸಭೆ ಕಾರ್ಯಕ್ರಮವನ್ನು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು ಉದ್ಘಾಟಿಸುವರು.

Contact Your\'s Advertisement; 9902492681

ಈ ಧರ್ಮ ಸಭೆಯಲ್ಲಿ ವಿವಿಧ ಮಠಾಧಿಶರು, ರಾಜಕೀಯ ಮುಖಂಡರು, ಭಕ್ತಾದಿಗಳು ಆಗಮಿಸಬೇಕೆಂದು ಶ್ರೀ ಬನದೇಶ್ಚರ ದೇವಸ್ಥಾನದ ಸಂಸ್ಥಾಪಕ ಪ್ರಧಾನ ಅರ್ಚಕ ವೇ.ಮೂ.ಭದ್ರಯ್ಯಾ ಸ್ವಾಮಿ ಸಾಲಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here