ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಆರಂಭವಾಗಿರುವ ಸ್ವಚ್ಛ ಭಾರತ್ ಅಭಿಯಾನದ ‘ಸಂಕಲ್ಪ ಸಪ್ತಾಹ’ ಅಂಗವಾಗಿ ಪಕ್ಷದ ವತಿಯಿಂದ ವಾರ್ಡ್ ನಂ 07 ದುಬೈ ಕಾಲೊನಿಯ ಕೆರೆ ಹತ್ತಿರ ಚಂದು ಪಾಟೀಲ ಅವರು ಸ್ವಚ್ಛತಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಉಪ ಮಹಾಪೌರ ಶಿವಾನಂದ ಪಿಸ್ತಿ, ವಾರ್ಡ್ ಸದಸ್ಯ ಕೃಷ್ಣ ನಾಯಕ, ಉಮೇಶ್ ಪಾಟೀಲ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.