ಕಲಬುರಗಿ: ಜಗತ್ ಬಡಾವಣೆಯಲ್ಲಿರುವ ಗೋಮುಖ ರಾಯರ ಮಠಕ್ಕೆ ಉಡುಪಿಯ ಫಲಿಮಾರು ಮಠದ ಶ್ರೀ ವಿದ್ಯಾಧಿಶ ಸ್ವಾಮಿಗಳು ಆಗಮಿಸಿದ್ದರು. ರಾಯರ ವೃಂದಾವನ ನೋಡಿ ಅತ್ಯಂತ ಹರ್ಷ ವ್ಯಕ್ತ ಪಡಿಸಿದರು. ಹೀಗೆ ಧಾರ್ಮಿಕ ಕಾರ್ಯಕ್ರಮಗಳು ಮಾಡ್ತೀರಿ ಅಂತ ಸಲಹೆ ಕೊಟ್ಟರು. ಶ್ರೀ ಗುರುರಾಜ್ ಸೇವಾ ಸಮಿತಿ ವತಿಯಿಂದ ಸ್ವಾಮಿಗಳಿಗೆ ಪಾದ ಪೂಜೆ ಮಾಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಅರ್ಚಕರಾದ ಶ್ರೀ ವಲ್ಲಭಚಾರ್ಯ, ಶ್ರೀ ಅನಂತಾಚಾರ್ಯ, ಶ್ರೀ ನಾರಾಯಣಾಚಾರ್ಯ, ಸಮಿತಿಯ ಅಧ್ಯಕ್ಷರಾದ ಅನಿಲ್ ಬಡದಲ್, ಮಾಜಿ ಅಧ್ಯಕ್ಷರಾದ ನರಹರಿ ಪಾಟೀಲ್, ಹಣಮಂತರಾವ್ ಗೊಟೂರ್, ಪವನ್ ಫಿರೋಜಾಬಾದ್, ಶಂಕರರಾವ್ ಕುಲಕರ್ಣಿ, ಪ್ರಮೋದ್ ದೇಸಾಯಿ, ಶಶಿಕಾಂತ್ ಸಾಗನೂರ್, ನೀಲ್ ಲೋಹಿತ್ ಜೇವರ್ಗಿ, ಉದಯ್ ಪಾಟೀಲ್, ಹಣಮಂತರಾವ್ ಜೇವರ್ಗಿ, ರಾಘವೇಂದ್ರ ಭೋಸಗಾ, ಪವನ್ ಭೋಸಗಾ, ಸಂಜು ಸುಂದರನಗರ್, ಉಮಾಕಾಂತ್ ಕುಲಕರ್ಣಿ ಇದ್ದರು. ನಂತರ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿಯ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತಿಸಲಾಯಿತು.