ಆಟೋ ನಿಲ್ದಾಣ ನಿರ್ಮಿಸಲು ಶೋಷಿತ ಪರ ಹೋರಾಟದ ಒಕ್ಕೂಟ ಮನವಿ

0
12

ಸುರಪುರ: ನಗರದ ವಿವಿಧ ಕಡೆಗಳಲ್ಲಿ ಆಟೋ ನಿಲ್ದಾಣಗಳನ್ನು ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಆಟೋ ಚಾಲಕರ ಘಟಕ ದಿಂದ ನಗರದ ಪೊಲೀಸ್ ಠಾಣೆಯ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ,ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ದಿಂದ ಮಹಾತ್ಮ ಗಾಂಧಿ ವೃತ್ತದ ಕಡೆಗೆ ಬರುವ ರಸ್ತೆಯಲ್ಲಿ ಆಟೋ ನಿಲ್ದಾಣ ನಿರ್ಮಿಸಬೇಕು ಮತ್ತು ಬಸ್ ನಿಲ್ದಾಣದಿಂದ ಕೆಂಭಾವಿ ಕಡೆಗೆ ಹೋಗುವ ರಸ್ತೆಯಲ್ಲಿ ಆಟೋ ನಿಲ್ದಾಣ ನಿರ್ಮಿಸಿ ಕೊಡುವಂತೆ ಆಗ್ರಹಿಸಿದರು,ಇಲ್ಲವಾದಲ್ಲಿ ಒಕ್ಕೂಟ ದಿಂದ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಸಿದರು.

Contact Your\'s Advertisement; 9902492681

ನಂತರ ತಹಸೀಲ್ದಾರರು ಹಾಗೂ ಪೊಲೀಸ್ ಇನ್ಸ್ಪೇಕ್ಟರ್ ಅವರಿಗೆ ಬರೆದ ಮನವಿಯನ್ನು ಠಾಣೆಯ ಮುಖ್ಯ ಪೇದೆ ಬಸವರಾಜ ಮುದಗಲ್ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆಟೋ ಘಟಕದ ಅಧ್ಯಕ್ಷ ಹಣಮಂತ ಬಿಚ್ಚಗತ್ತಿಕೇರ,ಉಪಾಧ್ಯಕ್ಷ ಲಕ್ಷ್ಮಣ ಲಿಂಗದಳ್ಳಿ,ರಾಮಣ್ಣ ಅರಳಳ್ಳಿ,ಹಣಮಂತ ಬಾಗಲಿ ದೇವಾಪುರ,ಈರಪ್ಪ ಚನ್ನಪಟ್ಟಣ,ಮೌನೇಶ ತಳವಾರ,ಮುಸ್ತಾಫ,ಭೀಮಪ್ಪ ಕಂಪಾಪುರ,ಶರಣಯ್ಯ ಹಿರೇಮಠ,ಬಸವರಾಜ ಅಂಬಿಗೇರ,ಶಾಂತಪ್ಪ ಮೇಲಿನಮನಿ,ಹಣಮಂತ ಗುಜಲರ್,ರವಿಗೌಡ,ರಾಯಪ್ಪ,ರಾಮಣ್ಣ,ಅಂಬ್ರೇಶ,ಭೀಮು ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here