ಕಲಬುರಗಿ: ಅಗ್ನಿ ಅವಘಡ ಸಂಭವಿಸಿ ಸೋಯಾಬಿನ್ ಬೆಳೆ ಸುಟ್ಟು ಹೋಗಿರುವುದರಿಂದ ಅಪಾರ ನಷ್ಟ ಅನುಭವಿಸಿರುವ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ಮಂಜೂರು ಮಾಡಬೇಕು ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಒತ್ತಾಯಿಸಿದ್ದಾರೆ.
ಆಳಂದ ತಾಲೂಕಿನ ಮೋಘಾ ಬಿ ಗ್ರಾಮದ ಇಮಾಮಸಾಬ್ ಹೈದರ ಅವರಿಗೆ ಸೇರಿದ 7 ಏಕರೆ ಸೋಯಾಬಿನ್, ತಂಬಾಕವಾಡಿ ಗ್ರಾಮದ ಸಿದ್ದಾರಾಮ ಕಾಂದೆ, ಮಟಕಿ ಗ್ರಾಮದ ವಿಜಯಾಬಾಯಿ ಹಿಪ್ಪರಗಿ, ಮಾಳಪ್ಪ ಧನಗರ, ಪಲ್ಲವಿ ಗಂಭೀರೆ ಅವರಿಗೆ ಸೇರಿದ ಸೋಯಾಬಿನ್ ಬಣಿಮೆಗಳು ಅಗ್ನಿಗೆ ಆಹುತಿಯಾಗಿವೆ ಇದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ ರೈತರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಆ ರೈತರಿಗೆ ಪರಿಹಾರ ಹಣ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.