ಕಲಬುರಗಿ: ಕಮಲಾಪುರ ತಾಲೂಕಿನ ಮಳಸಾಪುರ ತಾಂಡಾದಲ್ಲಿ ಮಂಗಳವಾರ ‘ಬಂಜಾರಾ ಜಾನಪದ ದೀಪಾವಳಿ’ ಕಾರ್ಯಕ್ರಮದಲ್ಲಿ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳ ವತಿಯಿಂದ ಬಂಜಾರಾ ಕಲಾವಿದರಿಗೆ ಸತ್ಕಾರ, ಬಾಲಕಿಯರು, ಮಹಿಳೆಯರಿಂದ ಜರುಗಿದ ಗಾಯನ, ನೃತ್ಯ, ಪೂರ್ಣ ಕಳಸದ ಮೆರವಣಿಗೆ ಜರುಗಿತು.
ಕಜಾಪ ಜಿಲ್ಲಾ ಅಧ್ಯಕ್ಷ ಎಂ.ಬಿ.ನಿಂಗಪ್ಪ, ಜಿಲ್ಲಾ ಬಂಜಾರಾ ಸರ್ಕಾರಿ, ಅರೆ-ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಪ್ರಭು ಜಾಧವ, ಕಾರ್ಯಕಾರಿಣಿ ಸದಸ್ಯ ಬಿಕ್ಕುಸಿಂಗ ರಾಠೋಡ, ಕಜಾಪ ಜಿಲ್ಲಾ ಕಾರ್ಯದರ್ಶಿ ಮತ್ತು ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ತಾಂಡಾದ ನಾಯಕ ಗೋಪಾಲ ಚವ್ಹಾಣ, ಗ್ರಾ.ಪಂ. ಸದಸ್ಯ ಶಿವಾಜಿ ಚವ್ಹಾಣ, ಪ್ರಮುಖರಾದ ಮಾರುತಿ, ತಾರಾಸಿಂಗ, ಗೋರಕನಾಥ, ಭೀಮಸಿಂಗ, ಶೇಖರ, ರಾಜು, ವಾಲು, ಚನ್ನು, ವೆಂಕಟ ಪೂಜಾರಿ, ರಾಜು ರಾಠೋಡ, ಸೋಮನಾಥ, ಸುಭಾಷ ನಾಯಕ, ಬಂಗು ಚಿನ್ನರಾಠೋಡ, ನೀಲಕಂಠ ರಾಠೋಡ ಸೇರಿದಂತೆ ನೂರಾರು ಜನರು, ಮಕ್ಕಳು, ಮಹಿಳೆಯರು ಪಾಲ್ಗೊಂಡಿದ್ದರು.