ನಾರಾಯಣಪೇಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಕಮಕನೂರ

0
22

ಕಲಬುರಗಿ : ನೆರೆಯ ತೆಲಂಗಾಣದ ರಾಜ್ಯದ ನಾರಾಯಣಪೇಟ್ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪರಿಣಿಕಾ ರೆಡ್ಡಿ ಅವರ ಗೆಲುವು ಖಚಿತ ಎಂದು ಎಐಸಿಸಿ ವಿಕ್ಷಕರಾಗಿ ಚುನಾವಣಾ ಪ್ರಚಾರಕ್ಕೆ ತೆರಳಿರುವ ವಿಧಾನ ಪರಿಷತ್ತಿನ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದ್ದಾರೆ.

ಮಂಗಳವಾರ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ತೆರಳಿದ ಅವರು, ಕ್ಷೇತ್ರದ ಕೇಂದ್ರ ಸ್ಥಾನ ನಾರಾಯಣಪೇಟ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ರಾಜ್ಯದಲ್ಲಿ ಕೆಸಿಆರ್ ನೇತೃತ್ವದ ಸರಕಾರ ಜನವಿರೋಧಿಯಾಗಿದೆ. ಭಾರಿ ಭ್ರಷ್ಟಚಾರ ನಡೆಸುವ ಮೂಲಕ ಅಭಿವೃದ್ಧಿ ಮರೆಮಾಚಿದೆ ಎಂದು ದೂರಿದರು.

Contact Your\'s Advertisement; 9902492681

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ನೀಡುತ್ತಿರುವ ಉಚಿತ ಯೋಜನೆಗಳು ಜನಮನ್ನಣೆ ಗಳಿಸಿವೆ. ನುಡಿದಂತೆ ನಡೆಯುತ್ತಿದ್ದೆವೆ. ನಾರಾಯಣಪೇಟ್ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿ ಕಣದಲ್ಲಿ ಇದ್ದು, ಅವರಿಗೊಂದು ಅವಕಾಶ ನೀಡಬೇಕೆಂದು ಕಮಕನೂರ ಮನವಿ ಮಾಡಿದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಸರಕಾರ ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಇದು ಬೇರೆ, ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ. ಈಗ ತೆಲಂಗಾಣದಲ್ಲಿ ಕಾಂಗ್ರೆಸ್ ಗಾಳಿ ಬಿಸುತ್ತಿದೆ. ಟಿಆರ್‍ಎಸ್‍ನ ಚಂದ್ರಶೇಖರ ಅವರು ಸುಳ್ಳು ಹೇಳುವ ಮೂಲಕ ಮತ್ತೇ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ, ಆದರೆ ಜನ ತೆಲಂಗಾಣದಲ್ಲಿ ಬದಲಾವಣೆ ಬಯಸಿದ್ದಾರೆ. ಹೀಗಾಗಿ ನಾರಾಯಣಪೇಟ ಕ್ಷೇತ್ರ ಸೇರಿದಂತೆ ಇಡಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಯುವ ನಾಯಕ ಚೇತನ ಗೋನಾಯಕ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here