ಕಲಬುರಗಿ: ಸಂಗಮೇಶ್ವರ ಮಹಿಳಾ ಮಂಡಲವು ನವೆಂಬರ್ 19 ರಂದು ಸಾಯಂಕಾಲ 5 ಗಂಟೆಗೆ ಕನ್ನಡ ರಾಜ್ಯೋತ್ಸವವನ್ನು ಸರಕಾರಿ ಮಹಿಳಾ ಅನಾಥಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮಂಡಲದ ಕಾರ್ಯದರ್ಶಿ ಸಂಧ್ಯಾ ಹೊನಗುಂಟಿಕರ್ ಮತ್ತು ಅಧ್ಯಕ್ಷರಾದ ವೈಶಾಲಿ ದೇಶಮುಖ ತಿಳಿಸಿದ್ದಾರೆ.
ಮಹಿಳೆಯರಿಗೆ ಸಾಂಸ್ಕೃತಿಕ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ನವೀನ್ ಕುಮಾರ್ ಮತ್ತು ಅತಿಥಿಗಳಾಗಿ ಸರಕಾರದ ಅನಾಥ ಬಾಲಕಿಯರ ವಸತಿಗೃಹದ ಸುಪ್ರೀಡೆಂಟ್ ಶ್ರೀಮತಿ ಅನುರಾಧ ಪಾಟೀಲ್ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ಸಂಗಮೇಶ್ವರ ಮಹಿಳಾ ಮಂಡಲದ ಅಧ್ಯಕ್ಷರಾದ ವೈಶಾಲಿ ದೇಶಮುಖ ವಹಿಸಲಿದ್ದಾರೆ. ಸಂಗಮೇಶ್ವರ ಮಹಿಳಾ ಮಂಡಲದ ಸದಸ್ಯರು ಭಾಗವಹಿಸಲಿದ್ದು, ಸರ್ವರು ಭಾಗವಹಿಸಲು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.