1 ರಿಂದ ಗರಗದ ಶ್ರೀ ಗುರು ಮಡಿವಾಳೇಶ್ವರ ಪುರಾಣ ಮಂಗಲೋತ್ಸವ ಸಮಾರಂಭ

0
76

ಕಲಬುರಗಿ: ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಲ್ಲಿರುವ ವಿದ್ಯಾನಗರ ಕಾಲೋನಿ ವಿದ್ಯಾನಗರ ವೆಲಫೆರ ಸೊಸೈಟಿ ವತಿಯಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡ ಬಂದ ಧಾರವಾಡ ಜಿಲ್ಲೆಯ ಗರಗದ ಶ್ರೀ ಮಡಿವಾಳೇಶ್ವರ ಪುರಾಣ ಪ್ರವಚನ ಸೆಪ್ಟೆಂಬರ್-೧ ರಂದು ರವಿವಾರ ಬೆಳಿಗ್ಗೆ 10.30 ಗಂಟೆಗೆ ಪುರಾಣ ಮಂಗಲೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾನಗರ ವೆಲಫೆರ ಸೋಸೈಟಿಯ ಅದ್ಯಕ್ಷರಾದ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ ತಿಳಿಸಿದ್ದಾರೆ.

ಶಹಾಪೂರ ಫಕೀರೇಶ್ವರ ಮಠದ ಶ್ರೀ ಮ.ನಿ.ಪ್ರ.ಗುರುಪಾದ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಲಿದ್ದಾರೆ. ಒಂದು ತಿಂಗಳ ಪರ‍್ಯಾಂತ ಪುರಾಣ ಪ್ರವಚನ ಮಾಡಿದ ಗೋಳಾ (ಬಿ) ಹಾಗೂ ನರೋಣದ ಶ್ರೀ ಪೂಜ್ಯ ಚನ್ನಮಲ್ಲ ಸ್ವಾಮಿಗಳು ಹೊಸಮಠ ಇವರ ನೇತೃತ್ವ ವಹಿಸಲಿದ್ದಾರೆ. ಹಾಗು ಎಂ.ಬಿ.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೇಕ್ಟರ್ ಶ್ರೀ ದಿಲೀಪ ಸಾರ್ಗ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿದ್ಯಾನಗರ ವೆಲಫೆರ ಸೊಸೈಟಿ ಅಧ್ಯಕ್ಷರಾದ ಶ್ರೀ ಮಲ್ಲಿನಾಥ ದೇಶಮುಖ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಧ್ಯಕ್ಷರಾದ ಉಮೇಶ ಶೆಟ್ಟಿ ಉಪಸ್ಥಿತರಿರುವರು.

Contact Your\'s Advertisement; 9902492681

ಆಕಾಶವಾಣಿ & ದೂರದರ್ಶನ ಕಲಾವಿದರಾದ ಶ್ರೀ ಜಗದೀಶ ಎಸ್. ನಗನೂರ ಹಾಗೂ ಶ್ರೀ ಜಗದೀಶ ಸಿದ್ದಣ್ಣ ದೇಸಾಯಿ ಕಲ್ಲೂರ ಸಂಗೀತಾ ಸೇವೆ ನೀಡಲಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ವಿದ್ಯಾನಗರ ವೆಲಫೆರ ಸೊಸೈಟಿಯ, ಶ್ರೀಮಲ್ಲಿಕಾರ್ಜುನ ತರುಣ ಸಂಘದ ಹಾಗೂ ಶಿವಶರಣಿ ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿರವರು.

೦೧ ರಂದು ರವಿವಾರ ಬೆಳಿಗ್ಗೆ ೧೦.೩೦ ಗಂಟೆಗೆ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಶ್ರೀಗಳ ಆರ್ಶೀವಚನ ನೀಡುವ ಮುಂಚೆ ವಿಶೇಷವಾಗಿ ತೋಟಲು ಹರಾಜು ನಡೆಸಲಾಗುವುದು. ಕಾರಣ ಕಾರ್ಯಕ್ರಮಕ್ಕೆ ವಿದ್ಯಾನಗರದ ಸುತ್ತಮುತ್ತಲಿನ ಬಡಾವಣೆಯ ಭಕ್ತಾದಿಗಳು ಆಗಮಿಸಿ ಶ್ರೀಗಳ ಆರ್ಶೀವಚನ ಕೇಳಿ ಪ್ರಸಾದ ತೆಗೆದುಕೊಂಡು ಹೊಗಬೇಕೆಂದು ವಿದ್ಯಾನಗರ ವೆಲಫೆರ ಸೊಸೈಟಿಯ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here