ಕಲಬುರಗಿ: ನಗರದ ಸಿದ್ಧಾರ್ಥ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಹೈದ್ರಾಬಾದ ಕರ್ನಾಟಕ ಸಿದ್ಧಾರ್ಥ ಸೇವಾ ಸಂಸ್ಥೆ ಅಂಡಿಯಲ್ಲಿ ತರಬೇತಿ ಕೇಂದ್ರದ 7ನೇವಾರ್ಷಿಕೋತ್ಸವ ಅಂಗವಾಗಿ ಬುದ್ಧ ವಂದನಾ ಮತ್ತು ಸಂವಿಧಾನ ಸಮರ್ಪಣಾ ದಿನಾಚಾರಣೆ ನಿಮಿತ್ತ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಲಾಯಿತು.
ನಂತರ ಸಂವಿಧಾನ ಪಿಠಿಕೆ ಓದಲಾಯಿತು. ಸಂಸ್ಥೆ ಅಧ್ಯಕ್ಷ ನಂದಕುಮಾರ ತಳಕೇರಿ, ಡಾ.ಸುನೀಲಕುಮಾರ ವಂಟಿ, ಸಾಯಬಣ್ಣಾ ತಳಕೇರಿ, ನೋರಶಪ್ಪಾ ತಳಕೇರಿ, ಮಹಾಂತಶ ದೊಡ್ಡಮನಿ, ಮಲ್ಲಿಕಾರ್ಝುನ ಮೈತ್ರಿ, ಸಂತೋಷ ಲುಬಿನಿ, ಮಹೇಶ ನಾಗನಹಳ್ಳಿ, ರಾಹುಲ ಉಪಾರೆ, ಮುತ್ತಣ್ಣ ಇದ್ದರು.