ಚಿತ್ತಾಪುರ; ತಾಲೂಕಿನ ವಾಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಚುನಾವಣೆ ಪ್ರಯುಕ್ತ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು.
ನಂತರ ಮಾತನಾಡಿದ ಅವರು, 23 ವಾರ್ಡ್’ಗಳಿಗೆ ನಡೆಯುತ್ತಿರುವ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಬೇಕಾದರೇ ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕಸಭೆ ಸದಸ್ಯ ಉಮೇಶ ಜಾಧವ, ಶಶಿಧರ ಸೂಗೂರ, ನೀಲಕಂಠ ಪಾಟೀಲ್, ಮಣಿಕಂಠ ರಾಠೋಡ, ರಾಜು ಮುಕ್ಕಣ್ಣ, ಗಿರಿ ಮಲ್ಲಪ್ಪ ಕಟ್ಟಿಮನಿ, ರಾಮಚಂದ್ರ ರೆಡ್ಡಿ, ಭೀಮರಾವ ದೊರೆ, ವೀರಣ್ಣ ಯಾರಿ ಸೇರಿದಂತೆ ಬಿಜೆಪಿ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.