ಕಾರು ದುರಂತ ವಿಕೆ ಪ್ರಸಾರಂಗ ವಿಭಾಗದ ವ್ಯವಸ್ಥಾಪಕ ಸ್ಥಿತಿ ಗಂಭೀರ

0
107

ಕಲಬುರಗಿ: ನಗರದ ಹೊರ ವಲಯದ ಫರಹತಾಬಾದ ಮುಖ್ಯ ರಸ್ತೆಯಲ್ಲಿ ಕಾರೊಂದು ನಿಂತ ಜೆಸಿಬಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಮಂಜುನಾಥ್ ಪಾಟೀಲ(40) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕಾರು ಚಾಲಕರಾಗಿದ್ದಾರೆ. ಮಂಜುನಾಥ್ ಪಾಟೀಲ ವಿಜಯ ಕರ್ನಾಟಕ ಪತ್ರಿಕೆಯ ಪ್ರಸಾರಂಗ ವಿಭಾದ ಹಿರಿಯ ವ್ಯವಸ್ಥಾಪರಿಗಿ ಸೇವೆ ಸಲ್ಲಿಸುತ್ತಿದರು ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಇತ್ತೀಚಿಗೆ ಮಂಜುನಾಥ ಅವರು ಬಳ್ಳಾರಿಯ ವಿ.ಕೆಯಿಂದ ಕಲಬುರಗಿಗೆ ವರ್ಗಾವಣೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಸೇವೆಗೆ ಹಾಜರಾಲು ಕಲಬುರಗಿಗೆ ಆಗಮಿಸುತ್ತಿದ್ದಾಗ, ಈ ದುರ್ಘಟನೆ ನಡೆದಿದೆ ಎಂದು ತಿಳಿದಬಂದಿದೆ.

ಫರಹತಾಬಾದ ಸಮಿಪ ಪಾಟೀಲ ಅವರು ಲಾರಿಯನ್ನು ಓವರ್ ಟೇಕ್ ಮಾಡುತ್ತಿದ್ದಾಗ ದುರಾದುಷ್ಟವಶಾತ ಜೆಸಿಬಿಗೆ ಡಿಕ್ಕಿ ಹೋಡೆದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗುತಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಂಜುನಾಥ ಅವರಿಗೆ ನಗರದ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದಾಬಾದಾದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಂಜುನಾಥ್ ಪಾಟೀಲ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ನಗರದ ಸಂಚಾರಿ ಪೊಲೀಸರು ತನಿಖೆ ನಡೆಸುತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here