ವಿದ್ಯುತ್ ತಗುಲಿ ಅಪಾರ ಪ್ರಮಾಣದ ಹತ್ತಿ ಸುಟ್ಟು ಕರಕಲು

0
14

ಸುರಪುರ: ತಾಲೂಕಿನ ದೇವಾಪುರ ಕ್ರಾಸ್ ಬಳಿಯಲ್ಲಿ ಹತ್ತಿ ಲಾರಿಯಲ್ಲಿ ಲೋಡ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿ ಅಪಾರ ಪ್ರಮಾಣದ ಹತ್ತಿ ಸುಟ್ಟು ಕರಕಲಾಗಿರುವ ಘಟನೆ ಜರುಗಿದೆ.

ಖಾಜಾಸಾಬ್ ಖಾಸಿಂ ಸಾಬ್ ನಾಗರಾಳ ಎನ್ನುವವರು ದೇವಾಪುರ ಕ್ರಾಸ್‍ಲ್ಲಿ ರೈತರಿಂದ ಹತ್ತಿ ಖರಿದಿ ಮಾಡಿ ಗುಡ್ಡೆ ಹಾಕಿದ್ದು,ಬೇರೆಡೆಗೆ ಸಾಗಿಲು ಲಾರಿಯಲ್ಲಿ ಲೋಡ್ ಮಾಡುವಾಗ ಮೇಲ್ಭಾಗದಲ್ಲಿದ್ದ ವಿದ್ಯುತ್ ತಂತಿ ತಗುಲಿ ಬೆಂಕೊ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.ನಿಖರವಾಗಿ ಬೆಂಕಿ ಹೇಗೆ ಹೊತ್ತಿಕೊಂಡಿದೆ ಎನ್ನುವುದು ಇನ್ನಷ್ಟೆ ತಿಳಿದುಬರಬೇಕಿದೆ.

Contact Your\'s Advertisement; 9902492681

ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.ಆದರೆ ಅಷ್ಟರೊಳಗೆ ಎಲ್ಲಾ ಹತ್ತಿ ಸುಟ್ಟು ಕರಕಲಾಗಿದ್ದು,ಸುಮಾರು 200 ಕ್ವಿಂಟಲ್ ಹತ್ತಿ ಇರಬಹುದು ಎಂದು ಹೇಳಲಾಗಿದೆ.ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು ಸಾಲ ಸೂಲ ಮಾಡಿ ವ್ಯಾಪಾರ ಮಾಡಲು ಮುಂದಾಗಿದ್ದ ಬಡಪಾಯಿಗೆ ಸರಕಾರ ನೆರವಾಗಬೇಕು ಎಂದು ಕಾಂಗ್ರೆಸ್ ಮುಖಂಡ ಚೆನ್ನಪ್ಪಗೌಡ ಜಕ್ಕನಗೌಡರ್ ದೇವಾಪುರ ಸರಕಾರಕ್ಕೆ ವಿನಂತಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here