ಕಲಬುರಗಿ: ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಮಾರುತಿರಾವ್ ಮಾಲೆ ಯವರ ನಿಧನದ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶೋಕ ಸಂತಾಪ ಮಾಡಲಾಯಿತು.
ಗೃಹ ಸಚಿವ ಡಾ. ಜಿ.ಪರಮೇಶ್ವರ, ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಖನೀಜ್ ಫಾತಿಮಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ರಾಧಾಕೃಷ್ಣ ಆರ್.ಕೆ., ರೇವು ನಾಯಕ ಬೆಳಮಗಿ, ಮಹಾತಂಪ್ಪ ಸಂಗಾವಿ, ಲಿಂಗರಾಜ ಕಣ್ಣಿ, ಈರಣ್ಣ ಝಳಕಿ, ಶಿವಾನಂದ ಹೋನಗುಂಟಿ, ಫರಾಜುಲ್ ಇಸ್ಲಾಂ, ಮಹೇಶಕುಮಾರ ತೇಲೂರಕರ, ಧರ್ಮರಾಜ ಹೇರೂರ ಸೇರಿದಂತೆ ಇತರರಿದ್ದರು.