ಸುರಪುರ: ನಗರದರ ರಂಗಂಪೇಟೆಯಲ್ಲಿ ಶುಕ್ರವಾರ ನಡೆಯುವ ಸಂತೆಯಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು ಮೊಬೈಲ್ ಕಳೆದು ಕೊಂಡವರು ಪರದಾಡುವಂತ ಸ್ಥಿತಿ ನಿರ್ಮಾಣ ವಾಗಿದೆ.
ಸಂತೆಯಲ್ಲಿ ಸಾವಿರಾರು ಜನರು ಸೇರುತ್ತಿದ್ದು,ಜನಸಂದಣಿಯನ್ನೆ ಬಂಡವಾಳ ಮಾಡಿಕೊಳ್ಳುವ ಮೊಬೈಲ್ ಕಳ್ಳರು ಸಂತೆಗೆ ಬಂದವರನ್ನೆ ಟಾರ್ಗೆಟ್ ಮಾಡಿ ಮೊಬೈಲ್ ಎಗರಿಸುತ್ತಿದ್ದಾರೆ.ಮೊಬೈಲ್ ಕಳೆದು ಕೊಂಡವರು ಬೆಲೆ ಬಾಳುವ ಮೋಬೈಲ್ ಕಳೆದುಕೊಂಡು ಗೋಳಾಡುವ ಸ್ಥಿತಿ ಎದುರಾಗುತ್ತಿದೆ.
ಸಂತೆಗೆ ಗ್ರಾಮೀಣ ಭಾಗದಿಂದ ಬರುವ ಜನರು ಮೊಬೈಲ್ ಕಳೆದುಕೊಂಡು ಪರದಾಡುತ್ತಿರುವದು ಕಂಡು ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಮೊಬೈಲ್ ಕಳ್ಳರಿಗೆ ಕಡಿವಾಣ ಹಾಕಲು ಕಳ್ಳರನ್ನು ಹಿಡಿದು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಂತೆಗೆಂದು ಹೋಗಿದ್ದೆ ಕಳ್ಳರು ನನ್ನ ಮೊಬೈಲ್ ಎಗರಿಸಿದ್ದಾರೆ,ಸಿಮ್ ತೆಗೆದುಕೊಳ್ಳಲು ಹೋದಾಗ ಅನೇಕ ಜನರು ಮೊಬೈಲ್ ಕಳೆದುಕೊಂಡಿರುವುದನ್ನು ಹೇಳಿದಾಗ ಅನೇಕರ ಮೊಬೈಲ್ ಕಳ್ಳತನವಾಗಿರುವುದು ಗೊತ್ತಾಯಿತು,ಪೊಲೀಸರು ಕಳ್ಳರನ್ನು ಹಿಡಿದು ಶಿಕ್ಷೆ ನೀಡಬೇಕು. -ಗುರುರಾಜ ರಂಗಂಪೇಟ.