ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ

0
31

ಕಲಬುರಗಿ: ಅಪ್ಪ ಪಬ್ಲಿಕ್ ಶಾಲೆ ಆವರಣದಲ್ಲಿನ ಶ್ರೀ ಬಸವರಾಜಪ್ಪ ಸ್ಮರಣಾರ್ಥ ಭವನದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕದಿಂದ ಮಾತೆ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಪ್ರಯುಕ್ತ ಹೃದಯದ ಹಾಡು ಕವನ ಸಂಕಲನ ಲೋಕಾರ್ಪಣೆ, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಜ್ಯೋತಿಬಾಫುಲೆ ಪ್ರಶಸ್ತಿ ಮತ್ತು ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್‍ಸಿ ಶಶೀಲ್ ನಮೋಶಿ, ಸುರೇಶ ಸಜ್ಜನ್, ಅಲ್ಲಮಪ್ರಭು ದೇಶಮುಖ, ಬಸವರಾಜ ಗೌನಳ್ಳಿ, ಮಹೇಶ ಹೂಗಾರ, ಶಿವರಾಜ ಪಾಟೀಲ, ಸಂಘದ ಜಿಲ್ಲಾಧ್ಯಕ್ಷೆ ಸೇವಂತಾ ಪಿ.ಚವ್ಹಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ, ಸುನೀಲ ಚವ್ಹಾನ, ಡಾ.ಪ್ರೇಮಸಿಂಗ್ ಚವ್ಹಾಣ, ಡಾ,ಬಾಬುರಾವ ಕುಲಕರ್ಣಿ, ವಿಜಯಶ್ರೀ ಹಿರೇಮಠ, ಮಹಾಂತೇಶ ಹೊಳಕುಂದ, ವಾಣಿಶ್ರೀ ಸಗರಕರ್ ಸೆರಿದಂತೆ ಸಂಘದ ಸದಸ್ಯರು ಇದ್ದರು.

Contact Your\'s Advertisement; 9902492681

ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಸಭಾ ಭವನದವರೆಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here