ಬಸವಣ್ಣ ವಿಶ್ವದ ಸಾಂಸ್ಕೃತಿಕ ನಾಯಕ; ಜಗದೀಶ ಶೆಟ್ಟರ್

0
95

ಕಲಬುರಗಿ: ಬಸವಣ್ಣ ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕ ಮಾತ್ರವಲ್ಲ ಇಡೀ ವಿಶ್ವದ ನಾಯಕರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಶುಕ್ರವಾರ ಜರುಗಿದ ಪ್ರಥಮ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರು ಸಮಾಜದ ಎಲ್ಲ ವರ್ಗ, ವರ್ಣ, ಜಾತಿಯ ಜನರನ್ನು ಅಪ್ಪಿಕೊಳ್ಳುವ ಮೂಲಕ ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತಿದರು ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಇನ್ನೂ ಅನೇಕ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಕಲ್ಪನೆಯೇ ಇಲ್ಲದಿರುವಾಗ ಪ್ರಜಾಪ್ರಭುತ್ವ ಕಲ್ಪನೆಯ ಪಾರ್ಲಿಮೆಂಟ್ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿಯೇ ಜಾರಿಗೆ ತಂದಿದ್ದರು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವ ಮಾತನಾಡಿ, ಮಹಿಳೆಗೆ ಸ್ವಾತಂತ್ರ್ಯ ಮತ್ತು ಸಮಾನತೆ ತಂದು ಕೊಟ್ಟ ಶರಣರ ವಿಚಾರಗಳು ಸಾರ್ವಕಾಲಿಕವಾಗಿವೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಹೊಸ ಆಲೋಚನೆ, ವಿಭಿನ್ನ ಪ್ರಯೋಗದ ಮೂಲಕ ಕಳೆದ ಎರಡು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಕಸಾಪ ಶಿಕ್ಷಕ, ಸಾಹಿತಿ, ಪತ್ರಕರ್ತ ಸೇರಿದಂತೆ ಅನೇಕ ಪ್ರಥಮಗಳಿಗೆ ನಾಂದಿ ಹಾಡಿದೆ. ವಚನ ಸಾಹಿತ್ಯ, ಸಂಸ್ಕೃತಿ ಪಸರಿಸುವುದು ಪರಿಷತ್ತಿನ ಪ್ರಥಮ ಆದ್ಯತೆಯಾಗಿದೆ. ಕನ್ನಡ ಸಾಹಿತ್ಯಕ್ಕೆ ಪುನರ್ಜನ್ಮ ನೀಡಿದ್ದು ವಚನ ಸಾಹಿತ್ಯವಾಗಿದ್ದು, ಹಾಗಾಗಿ, ವಚನಗಳ ಸಾರವನ್ನು ಓದಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ. ನೀಲಾಂಬಿಕಾ ಪೆÇಲೀಸ್ ಪಾಟೀಲ ಮಾತನಾಡಿದರು. ಧಾರವಾಡ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಸುರೇಶ ಸಜ್ಜನ್, ಗೌರವಾಧ್ಯಕ್ಷ ಡಾ. ಎಸ್.ಬಿ. ಕಾಮರೆಡ್ಡಿ , ಮಲ್ಲಿನಾಥ ಪಾಟೀಲ ಕಾಳಗಿ, ಗೌಡೇಶ ಬಿರಾದಾರ, ಮಲ್ಲಿನಾಥ ದೇಶಮುಖ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಟಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಬಾಬುರಾವ ಪಾಟೀಲ, ಡಾ. ರೆಹಮಾನ್ ಪಟೇಲ್, ಶಕುಂತಲಾ ಪಾಟೀಲ, ಡಾ. ಕೆ ಗಿರಿಮಲ್ಲ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ಬಂಗಾರಪ್ಪ, ಶ್ರೀದೇವಿ ಕೋರೆ, ಅಶ್ವಿನಿ ಹಡಪದ, ಶಾಮಸುಂದರ ಕುಲಕರ್ಣಿ, ಎಸ್ ಕೆ ಬಿರಾದಾರ, ಪ್ರಭುಲಿಂಗ ಮೂಲಗೆ, ಸುರೇಶ ದೇಶಪಾಂಡೆ, ಪ್ರಭು ಫುಲಾರಿ, ಗುರುಬಸಪ್ಪ ಸಜ್ಜನಶೆಟ್ಟಿ , ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ವಿನೋದ ಜೇನವೇರಿ, ಮುಡುಬಿ ಗುಂಡೇರಾವ, ಸುರೇಶ ಲೇಂಗಟಿ, ವೀರೇಂದ್ರ ಕೊಲ್ಲೂರ, ನಾಗಪ್ಪ ಸಜ್ಜನ್, ಹಣಮಂತ ಖಜೂರಿ, ಸಂತೋಷ ಕುಡಳ್ಳಿ, ಬಿ ಎಂ ಪಾಟೀಲ ಕಲ್ಲೂರ, ಕಲ್ಯಾಣಕುಮಾರ ಶೀಲವಂತ, ವಿದ್ಯಾಸಾಗರ ದೇಶಮುಖ, ಭೀಮಾಶಂಕರ ಅಂಕಲಗಿ, ವೇದಿಕೆಯಲ್ಲಿದ್ದರು.

ಸಮ್ಮೇಳನಾಧ್ಯಕ್ಷರ ಭಾಷಣ: ಸಕಲ ಜೀವಾತ್ಮರಿಗೆ ಲೇಸು ಬಯಸಿದ ಬಸವಾದಿ ಶರಣರ ವೈಚಾರಿಕ ವಿಚಾರಗಳು ಪ್ರತಿಯೊಬ್ಬರ ಬದುಕಿಗೆ ಅಗತ್ಯವಾಗಿದ್ದು, ವಚನ ಪಠಣಕ್ಕಿಂತ ವಚನವನ್ನು ಬದುಕಿನಲ್ಲಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರವಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಶರಣ ಸಾಹಿತಿ ನೀಲಾಂಬಿಕಾ ಪೊಲೀಸ ಪಾಟೀಲ ತಿಳಿಸಿದರು.

ಸ್ತ್ರೀಯರಿಗೆ ಸಮಾನತೆ ಕಲ್ಪಿಸಿದ್ದು ವಚನಕಾರರ ಇನ್ನೊಂದು ವೈಶಿಷ್ಟ್ಯ ವಾಗಿದೆ. ಅಂಗದ ಮೇಲೆ ಇಷ್ಟಲಿಂಗ ಕರುಣಿಸುವ ಮೂಲಕ ವಿಶ್ವ ಮಾನವ ಸಂದೇಶ ತುಂಬಿದರು. ಕಾಯಕ ಮತ್ತು ದಾಸೋಹ ಎಂಬ ಎರಡು ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಶರಣರು, ನುಡಿದಂತೆ ನಡೆದರು. ನಡೆದಂತೆ ನುಡಿದರು. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ನಿರ್ಮೂಲನೆ ಮಾಡಿ ವೈಚಾರಿಕ ಸಮಾಜಕ್ಕೆ ಭದ್ರ ಬುನಾದಿ ಹಾಕಿದರು ಎಂದು ಅವರು ತಿಳಿಸಿದರು.

ಜನರು ಇಲ್ಲದ ಭ್ರಮೆಗಳಲ್ಲಿ ಬದುಕದೆ ಕೊಟ್ಟ ಕುದುರೆಯ ಸವಾರಿಯನ್ನು ನಿಜದ ಬದುಕಲ್ಲೇ ಬದುಕಬೇಕು ಎಂಬ ವಾಸ್ತವ ಲೋಕವನ್ನು ಜನತೆಗೆ ತೆರೆದಿಟ್ಟರು.

ಇದಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಕನ್ನಡ ಭವನದವರೆಗೆ ವಚನ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ವಚನಗಳ ಕಟ್ಟು ಹೊತ್ತು ಮೆರವಣಿಗೆ ನಡೆಯಿತು. ಶರಣರ ವಿವಿಧ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು.

ಶಹಾಪುರಿನ ಶರಣ ಸಾಹಿತಿ ಶಿವಣ್ಣ ಇಜೇರಿ ಸಮಾರೋಪ ನುಡಿಗಳನ್ನಾಡಿದರು. ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಪ್ರಭುಲಿಂಗ ಮಹಾಗಾಂವಕರ್, ಸುರೇಶ ಡಿ ಬಡಿಗೇರ, ಶಿವಕುಮಾರ ಬಿದರಿ ವೇದಿಕೆ ಮೇಲಿದ್ದರು.

ವಿವಿಧ ಕ್ಷೇತ್ರದ ಪ್ರಮುಖರಾದ ಜಗದೀಶ ಮರಪಳ್ಳಿ, ಪ್ರೊ. ಶ್ರೀದೇವಿ ಹರವಾಳ, ಗೌರಿ ಕರಣಗಿ, ಶೈಲಜಾ ಚವ್ಹಾಣ, ಜಗದೇವಿ ಚೆಟ್ಟಿ, ರಮೇಸ ಪಾಟೀಲ, ಜಗನ್ನಾಥ ರಾಚೋಟಿ, ಶಂಕ್ರೆಪ್ಪ ಮಹಾಶೆಟ್ಟಿ, ಶಂಕರ ಕಟ್ಟಿ ಸಂಗಾವಿ, ಅಲ್ಲಾವುದ್ದೀನ್ ಸಾಗರ, ಸಂದೀಪ ದೇಸಾಯಿ, ಗಣೇಸರಾವ ಹುಲಿಮನಿ, ಧರ್ಮರಾಯ ಜವಳಿ, ಮೋದಿನ್ ಪಟೇಲ್, ಚಂದ್ರಕಾಂತ ನಾಟಿಕಾರ ಅವರನ್ನು ಸತ್ಕರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here