ಖಣವೆ ನೀರಿನಲ್ಲಿ ಉರುಳಿಬಿದ್ದ ಕಾರಿನಲ್ಲಿ ಪಂಪ್ ಆಪರೇಟರ್ ಕೊಳೆತ ಶವ ಪತ್ತೆ

0
39

ಕಲಬುರಗಿ: ನಗರದ ಹೊರವಲಯದಲ್ಲಿನ ಫರತಾಬಾದ್ ಹತ್ತಿರದ ಖಣಿವೆ ನೀರಿನಲ್ಲಿ ಉರುಳಿಬಿದ್ದ ಕಾರೊಂದು ಪತ್ತೆಯಾಗಿದ್ದು, ಆ ಕಾರಿನಲ್ಲಿ ಕಾಣೆಯಾಗಿದ್ದ ಪಂಪ್ ಆಪರೇಟರ್ ಕೊಳೆತ ಶವ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.

ಮೃತನಿಗೆ ಸರ್ಕಾರಿ ಆಸ್ಪತ್ರೆಯಲ್ಲಿನ ಹೊರಗುತ್ತಿಗೆ ಮೇಲಿನ ಪಂಪ್ ಆಪರೇಟರ್ ಹಾಗೂ ಸುಂದರ ನಗರದ ನಿವಾಸಿ ಅಮೃತ್ ತಂದೆ ರಾಮಚಂದ್ರ ಹೂವಿನಭಾವಿ(41) ಎಂದು ಗುರುತಿಸಲಾಗಿದೆ.

Contact Your\'s Advertisement; 9902492681

ಪತ್ನಿಯೂ ಸಹ ಜಿಮ್ಸ್‍ನಲ್ಲಿ ಸ್ಟಾಪ್ ನರ್ಸ್ ಎಂದು ಕೆಲಸ ಮಾಡುತ್ತಿದ್ದು, ಅಮೃತ್ ಕಾಣೆಯಾದ ಕುರಿತು ಬ್ರಹ್ಮಪೂರ್ ಠಾಣೆಗೆ ದೂರು ಸಲ್ಲಿಸಿದ್ದರು.

ಆದಾಗ್ಯೂ, ಹತ್ತು ದಿನಗಳ ನಂತರ ನಗರದ ಹೊರವಲಯದಲ್ಲಿನ ಖಣಿವೆ ನೀರಿನಲ್ಲಿ ಉರುಳಿಬಿದ್ದ ಕಾರಿನಲ್ಲಿ ಆತನ ಶವ ಪತ್ತೆಯಾಗಿದ್ದು ಕಂಡುಬಂದಿದೆ. ಕಾರು ಚಲಾಯಿಸುವಾಗ ನಿಯಂತ್ರಣ ತಪ್ಪಿ ನೀರಿಗೆ ಬಿದ್ದು ಅವಘಡ ಸಂಭವಿಸಿರಬಹುದು ಎನ್ನಲಾಗಿದೆ. ಆದಾಗ್ಯೂ, ಕುಟುಂಬಸ್ಥರು ಅನುಮಾನಾಸ್ಪದ ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಪಿಐ ಮಹಾಂತೇಶ್ ಪಾಟೀಲ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here