ಕಲಬುರಗಿ: ಜಿಲ್ಲೆಯ ಚಿತ್ತಾಪೂರ ತಾಲೂಕಿನ ಬೆಣ್ಣೂರ(ಬಿ) ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರೀ ಹಜರತ ಮೌಲಾಲಿ ಸಾಹೇಬರ ಜಾತ್ರಾ ಮಹೋತ್ಸವ ಹಾಗೂ ಧರ್ಮ ಸಭೆಯ ಕಾರ್ಯಕ್ರಮವನ್ನು ಜನವರಿ 27 ರಂದು ರಾತ್ರಿ 9 ಗಂಟೆಗೆ ಗಂದೋತ್ಸವ ಕಾರ್ಯಕ್ರಮ ಪೂಜ್ಯ ಶ್ರೀ ಸೈಯದ್ ಶಾಹಾ ಅಬುಲ್ ಖಾಸಿಂ ಖಾದ್ರಿ ಉರ್ಫ ಹೈರತ ಪಾಷಾ ನೀಲೂರ ಇವರ ಹಸ್ತದಿಂದ ನೇರವೇರಿಸಲಾಗುವುದು.
28 ರಂದು ರವಿವಾರ ಧರ್ಮ ಸಭೆ ದೀಪೆÇೀತ್ಸವ, ಸಂಗಿತ ಕಾರ್ಯಕ್ರಮ ಜರಗುವುದು. ಸದರಿ ಕಾರ್ಯಕ್ರಮದಲ್ಲಿ ನಾಡಿನ ಸಂತರು ಶರಣರು ರಾಜಕೀಯ ಧುರಿಣರು ಭಾಗವಹಿಸುವರು.
29 ರಂದು ಸೋಮವಾರ ಬೆಳಿಗ್ಗೆ 07:00 ಗಂಟೆಗೆ ಜಿಯಾರತ ಹಾಗೂ ಕುಸ್ತಿ ಕಾರ್ಯಕ್ರಮ ನಡೆಯುವುದು. ಆದ್ದರಿಂದ ಸದರಿ ಜಾತ್ರೆಯಲ್ಲಿ ಎಲ್ಲಾ ಸದ್ಭಕರು ಪಾಲ್ಗೊಂಡು ಆಶಿರ್ವಾದ ಪಡೆದುಕೊಂಡು ಪುನಿತರಾಗಬೇಕೆಂದು ಭಕ್ತಾಧಿ ರವಿ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.