ಕಲಬುರಗಿ: ನಗರದ ಕೋರ್ಟ್ ಆವರಣದಲ್ಲಿ ಗುಲ್ಬರ್ಗ ಬಾರ್ ಅಸೋಸಿಯೇಷನ್ ಅವರ ನೇತೃತ್ವದಲ್ಲಿ 75ನೇ ಗಣರಾಜ್ಯೋತ್ಸವ ಅಂಗವಾಗಿ ಅಧ್ಯಕ್ಷ ಗುಪ್ತಲಿಂಗ ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು ಭಾರತೀಯರಿಗೆ ಇದೊಂದು ಸುವರ್ಣ ದಿನವಾಗಿದೆ.ಭಾರತ ಸಂವಿಧಾನ ಜಾರಿಗೆ ಬಂದ ದಿನವಾದ ಇಂದು ಪ್ರತಿಯೊಬ್ಬರಿಗೂ ಶಿಕ್ಷಣ, ಮೂಲಭೂತ ಹಕ್ಕುಗಳು ಸೇರಿದಂತೆ ಅನೇಕ ಸೌಲಭ್ಯಗಳು ದೊರೆತಿವೆ.ಇದಕ್ಕೆ ಕಾರಣಿಕರ್ತರಾದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ನಾವು ಮರೆಯುವಂತಿಲ್ಲ ಎಂದರು.
ಸಮಸ್ತ ಭಾರತ ದೇಶದ ನಾಗರಿಕರು ನಮ್ಮ ಹೆಮ್ಮೆಯ ಸವಿಧಾನ ಆಗಿದೆ ಇದನ್ನು ಎಲ್ಲರೂ ಪಾಲಿಸಬೇಕಾಗಿ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಜಿಲ್ಲಾ ನ್ಯಾಯಾಧೀಶರು ಮತ್ತು ಸಂಘದ ಕಾರ್ಯದರ್ಶಿಗಳಾದ ಬಸವರಾಜ್ ನಾಸಿ, ಧರ್ಮಣ್ಣ ಎಸ್. ಜೈನಾಪುರ್, ಶಿವರಾಜ್ ಸಿ ಪಾಟೀಲ್, ಎಸ್. ಕೆ. ಚಿಕ್ಕಳ್ಳಿ, ವಕೀಲರು ಹಾಗೂ ವಕೀಲ ಬಾಂಧವರು ಉಪಸ್ಥಿತರಿದ್ದರು.