ರುಕ್ಮಾಪುರ:ಹಳೆ ವಿದ್ಯಾರ್ಥಿಗಳ ಸಭೆ ಸಂಚಾಲಕರ ನೇಮಕ

0
10

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಶ್ರೀ ಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭ್ಯಸಿಸಿದ ಹಳೆ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಸಭೆ ನಡೆಸಿದರು.

ಸಂಘ ರಚನೆ ಮಾಡಲು ಮಹೇಶ್ ಗಂಜಿ ಹಾಗೂ ಬಸವರಾಜ ಯಾಳಗಿ ರವರನ್ನು, ಸಂಚಾಲಕರನ್ನಾಗಿ ನೇಮಕಗೊಂಡರು. ಈ ಶಾಲೆಯಲ್ಲಿ, ಇಲ್ಲಿಯ ವರೆಗೆ ೭೦೦ ವಿದ್ಯಾರ್ಥಿಗಳು, ಅಭ್ಯಸಿಸಿ, ಡಾಕ್ಟರ್, ಇಂಜಿನಿಯರ್, ಸರ್ಕಾರಿ ಅಧಿಕಾರಿ, ಖಾಸಗೀ ಹಾಗೂ ಸರ್ಕಾರಿ ಶಾಲೆಗಳ ಶಿಕ್ಷಕರಾಗಿದ್ದಾರೆ. ಅವರೆಲ್ಲರನ್ನು ಸಂಪರ್ಕಿಸಿ, ಒಂದು ತಿಂಗಳೊಳಗೆ ಸಂಘ ರಚಿಸಲು ತಿಮಾ೯ನಿಸಲಾಯಿತು..ನಂತರ ಆಡಳಿತ ಮಂಡಳಿಯ ಸಭೆ ನಡೆಯಿತು.

Contact Your\'s Advertisement; 9902492681

ನೂತನ ಮುಖ್ಯ ಉಪಾಧ್ಯಾಯರಾಗಿ ನೇಮಕಗೊಂಡ ಹಾಗೂ ತಾಲ್ಲೂಕಿನ ಅತ್ಯುತ್ತಮ ಶಿಕ್ಷಕಿ ಎಂದು ಪ್ರಶಸ್ತಿ ಪಡೆದ ಗಿರಿಜಾದೇವಿ ಮಿಣಜಿಗಿ ರವರನ್ನು ಶಾಲು ಹೊದಿಸಿ ಗೌರವಿಸಲಾಯಿತು.ಸಿ.ಎನ್.ಭಂಡಾರೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಡಾ.ಬಿಜಿ ಭಾವಿ, ಪತ್ರಕತ೯ ಸುಭಾಷ್ ಬಣಗಾರ, ನಿವೃತ್ತ ಡಿಡಿಪಿಯು ಜಿಎಸ್ ಮಿಣಜಿಗಿ, ಮತ್ತಿತರರು ಉಪಸ್ಥಿತರಿದ್ದರು..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here