ಕಲಬುರಗಿ: ವಿಠ್ಠಲ್ ಹೇರೂರವರ ವಿಚಾರಧಾರೆಗಳು ಮತ್ತು ಅವರ ಸಾಮಾಜಿಕ ನ್ಯಾಯಪರವಾದ ನಿಲುವನ್ನು ಎತ್ತಿ ಹಿಡಿಯುವುದು ನಮ್ಮ ಮಹತ್ತರವಾದ ಜವಾಬ್ದಾರಿಯಾಗಿದೆ ಎಂದು ಹೇರೂರು ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಭಗವಂತಪ್ಪ ಹೇರೂರು ಅಭಿಪ್ರಾಯ ಪಟ್ಟಿದ್ದಾರೆ.
ಬಡವರ, ಹಿಂದುಳಿದವರ ದೀನ ದಲಿತರ ಧ್ವನಿಯಾಗಿ, ಅವರಲ್ಲಿ ಶಕ್ತಿ ತುಂಬುವ ಮೂಲಕ ಅವರೊಬ್ಬ ಜಾತ್ಯತೀತ ನಾಯಕವಾಗಿದ್ದರು. ಅವರ ತತ್ವ, ಸಿದ್ದಾಂತ, ವಿಚಾರಧಾರೆಗಳನ್ನು ಮುಂದುವರಿಸಿಕೊಂಡು ಹೋಗಲು ಸ್ವಾಭಿಮಾನಿ ವಿಠ್ಠಲ್ ಹೇರೂರು ಸಾಮಾಜಿಕ ನ್ಯಾಯಪರ ವೇದಿಕೆ ಎಂಬ ಒಂದು ಸಾಮಾಜಿಕ ಸಂಘಟನೆಯನ್ನು ಕಟ್ಟಿದ್ದೇವೆ ಎಂದು ಪತ್ರಿಕಾ ಹೇಳಿಕೆ ನೀಡಿ ತಿಳಿಸಿದ್ದಾರೆ.
ತಾತ್ಕಾಲಿಕವಾಗಿ ಈ ಸಂಘಟನೆಯ ಅಧ್ಯಕ್ಷತೆಯನ್ನು ತಳವಾರ ಸಮಾಜದ ರಾಜ್ಯಾಧ್ಯಕ್ಷರಾದ ಡಾ. ಸರ್ದಾರ ರಾಯಪ್ಪ ಅವರಿಗೆ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರಿಗೆ ಇವರು ಸಂಘದ ಕಾರ್ಯಚಟುವಟಿಕೆಗಳನ್ನು ಮಾಡಿಕೊಂಡು ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.