ಆಳಂದ ದರ್ಗಾ: ರಾಘವ ಚೈತನ್ಯರಿಗೆ ಮಹಾಶಿವರಾತ್ರಿ ಪೂಜೆಗೆ ಆಗ್ರಹಿಸಿ ರಥಯಾತ್ರೆ ಮಾರ್ಚ್. 1 ರಿಂದ

0
41

ಕಲಬುರಗಿ: ಆಳಂದ ಪಟ್ಟಣದಲ್ಲಿರುವ ಪುರಾತನ ಶ್ರೀ ರಾಘವ ಚೈತನ್ಯ ಮಂದಿರದಲ್ಲಿ ಮಹಾಶಿವರಾತ್ರಿಯಂದು ಭಕ್ತರಿಗೆ ವಿಶೇಷ ಪೂಜೆ ಮಾಡಲು ಹಾಗೂ ಮುಕ್ತ ದರ್ಶನಕ್ಕಾಗಿ ಜಿಲ್ಲಾಡಳಿತವು ಅನುಮತಿ ನೀಡಬೇಕು ಎಂದು ಶ್ರೀ ರಾಘವ ಚೈತನ್ಯ ಮಂದಿರ ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ನಾಗೇಂದ್ರ ಕಾಬಡೆ ಅವರು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಶರತ್ತಿನ ಮೇಲೆ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಭಕ್ತರಿಗೆ ಯಾವುದೇ ರೀತಿಯಲ್ಲಿ ದರ್ಶನಕ್ಕೆ ಅವಕಾಶ ಕೊಡಲಿಲ್ಲ. ಈ ಬಾರಿ ಯಾವುದೇ ಶರತ್ತು ವಿಧಿಸದೆ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಪುರಾತನ ರಾಘವ ಚೈತನ್ಯ ಶಿವಲಿಂಗವು ಜಿಲ್ಲೆಯ ಲಕ್ಷಾಂತರ ಭಕ್ತರ ಶೃದ್ಧಾ ಕೇಂದ್ರವಾಗಿದೆ. ಮಹಾ ಶಿವರಾತ್ರಿಯಂದು ನೂರಾರು ವರ್ಷಗಳಿಂದ ರಾಘವ ಚೈತನ್ಯರ ದರ್ಶನ ಪಡೆಯಲು ಜನ ಆಗಮಿಸುತ್ತಾರೆ. ಕಳೆದ ಎರಡು ವರ್ಷ ಭಕ್ತರಿಗೆ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಸರ್ಕಾರ ಕಸಿದುಕೊಂಡಿದೆ. ಕಾರಣ ಈ ಬಾರಿ ಮಹಾಶಿವರಾತ್ರಿಯನ್ನು ಶೃದ್ಧಾ ಭಕ್ತಿಯಿಂದ ಯಾವುದೇ ಅಡೆ, ತಡೆಯಿಲ್ಲದೇ ಭಕ್ತಾದಿಗಳು ಆಚರಿಸಲು ಅವಕಾಶ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ವಿಶೇಷ ಪೂಜೆ ಹಾಗೂ ಭಕ್ತರಿಗೆ ದರ್ಶನಾಶೀರ್ವಾದಕ್ಕೆ ಅವಕಾಶ ಕೊಡಬೇಕೆಂಬ ಹಿನ್ನೆಲೆಯಲ್ಲಿ ರಾಘವ ಚೈತನ್ಯ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 1ರಂದು ನರೋಣಾ, ಕಡಗಂಚಿ, 2ರಂದು ನಿಂಬರ್ಗಾ, ಭೂಸನೂರ್, 3ರಂದು ಮಾಡಿಯಾಳ್, ಯಳಸಂಗಿ, 4ರಂದು ಮಾದನಹಿಪ್ಪರಗಾ, ಹಿರೋಳಿ, 5ರಂದು ಮಟಕಿ, ತಡೋಳಾ, 6ರಂದು ಖಜೂರಿ, ತಡಕಲ್, 7ರಂದು ಬೆಳಿಗ್ಗೆ 9 ಗಮಟೆಗೆ ಮುನ್ನಹಳ್ಳಿ ಗ್ರಾಮದವರೆಗೆ ರಥಯಾತ್ರೆ ಸಂಚರಿಸಲಿದೆ ಎಂದು ಅವರು ಹೇಳಿದರು.

ರಥಯಾತ್ರೆಯ ಕೊನೆಯ ದಿನ ಮಾರ್ಚ್ 8ರಂದು ಆಳಂದ್ ಪಟ್ಟಣದ ಎಸ್‍ಆರ್‍ಜಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಮಹಾ ಮೃತ್ಯುಂಜಯ ಹೋಮ ಜರುಗಲಿದೆ. ಈ ಸಂದರ್ಭದಲ್ಲಿ ಭಕ್ತರು ಭಜನೆ, ಧಾರ್ಮಿಕ ಪ್ರವಚನ, ಬಿಲ್ವಪತ್ರೆ ಅರ್ಪಣೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ತಿಳಿಸಿದರು.

ಪೂಜೆಯ ನಂತರ ಶಿಮಾಲಾಧಾರಿ ಭಕ್ತಾಧಿಗಳು ಶ್ರೀ ರಾಘವ ಚೈತನ್ಯ ಶಿವಲಿಂಗದ ದರ್ಶನ ಪಡೆಯಲಿದ್ದಾರೆ. ಆದ್ದರಿಂದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ಸಾಗಲು ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ಅವರು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್, ಹರ್ಷಾನಂದ್ ಗುತ್ತೇದಾರ್, ಹಣಮಂತರಾವ್ ಮಲಾಜಿ, ಸಂತೋಷ್ ಹಾದಿಮನಿ, ಬಾಬುರಾವ್ ಹಾಗರಗುಂಡಗಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here