ಮಾರ್ಚ್ 2ರಂದು ವಿಕಲಚೇತನ ನೌಕರರ ಜಿಲ್ಲಾ ಮಟ್ಟದ ಸಮ್ಮೇಳನ

0
96

ಕಲಬುರಗಿ: ನಗರದ ಗೋವಾ ಹೋಟೆಲ್ ಹಿಂದುಗಡೆ ಇರುವ ಡಾ‌. ಬಸವರಾಜಪ್ಪ ಸ್ಮರಣಾರ್ಥ (ಸೆಂಚುರಿಯನ್ ಹಾಲ್) ಭವನದಲ್ಲಿ ಶನಿವಾರ ಮಾರ್ಚ್ 2 ರಂದು ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಸಮ್ಮೇಳನವನ್ನು ಆಯೋಜಿಸಲಾಗಿದೆ‌.

ಕಾರ್ಯಕ್ರಮದಲ್ಲಿ ಕ್ರಿಯಾಶೀಲ ವಿಕಲಚೇತನ ‌ಸರ್ಕಾರಿ ನೌಕರರಿಗೆ “ಸೇವಾ ರತ್ನ ಪ್ರಶಸ್ತಿ”, ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವಿಕಲಚೇತನರಿಗೆ “ಸಾಧನಾ ಪ್ರಶಸ್ತಿ” ಹಾಗೂ 10/12 ನೇ ತರಗತಿಯಲ್ಲಿ ಪಾಸಾದ ವಿಶೇಷಚೇತನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಶಸ್ತಿ ನಿಡಲಾಗುವುದು. ಅದೇ ದಿನ ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016ರ ಕುರಿತು ವಿಶೇಷ ಕಾರ್ಯಾಗಾರ ಕೂಡ ಹಮ್ಮಿಕೊಳ್ಳಲಾಗಿದೆ.

Contact Your\'s Advertisement; 9902492681

ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಕಾರ್ಯಕ್ರಮಕ್ಕೆ ಆಗಮಿಸಿಬೇಕೆಂದು ಕರ್ನಾಟಕ ರಾಜ್ಯ ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುಮಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here