ಕಲಬುರಗಿ: ನಗರದ ಗೋವಾ ಹೋಟೆಲ್ ಹಿಂದುಗಡೆ ಇರುವ ಡಾ. ಬಸವರಾಜಪ್ಪ ಸ್ಮರಣಾರ್ಥ (ಸೆಂಚುರಿಯನ್ ಹಾಲ್) ಭವನದಲ್ಲಿ ಶನಿವಾರ ಮಾರ್ಚ್ 2 ರಂದು ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಕ್ರಿಯಾಶೀಲ ವಿಕಲಚೇತನ ಸರ್ಕಾರಿ ನೌಕರರಿಗೆ “ಸೇವಾ ರತ್ನ ಪ್ರಶಸ್ತಿ”, ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವಿಕಲಚೇತನರಿಗೆ “ಸಾಧನಾ ಪ್ರಶಸ್ತಿ” ಹಾಗೂ 10/12 ನೇ ತರಗತಿಯಲ್ಲಿ ಪಾಸಾದ ವಿಶೇಷಚೇತನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಶಸ್ತಿ ನಿಡಲಾಗುವುದು. ಅದೇ ದಿನ ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016ರ ಕುರಿತು ವಿಶೇಷ ಕಾರ್ಯಾಗಾರ ಕೂಡ ಹಮ್ಮಿಕೊಳ್ಳಲಾಗಿದೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಕಾರ್ಯಕ್ರಮಕ್ಕೆ ಆಗಮಿಸಿಬೇಕೆಂದು ಕರ್ನಾಟಕ ರಾಜ್ಯ ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುಮಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.