ಸಾಂಸ್ಕøತಿಕ ಶ್ರೀಮಂತಿಕೆಗೆ ಸಮ್ಮೇಳನಗಳು ಅವಶ್ಯಕ: ಡಾ. ಟಿ ಎಂ ಭಾಸ್ಕರ್

0
172

ಕಲಬುರಗಿ: ನಾಡಿನ ಕಲೆ, ಸಾಹಿತ್ಯ ಹಾಗೂ ಸಾಂಸ್ಕøತಿಕ ಶ್ರೀಮಂತಿಕೆಗೆ ಸಮ್ಮೇಳನಗಳು ತುಂಬಾ ಅವಶ್ಯವಾಗಿವೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ನಡೆದ ಸಾಂಸ್ಕøತಿಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮ್ಮೇಳನಗಳು ಸಾಮಾಜಿಕ ಜವಾಬ್ದಾರಿ ಹೊಂದಿವೆ. ಇಂದಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಮಡುಕೊಳ್ಳುವ ದಿಸೆಯಲ್ಲಿ ಸಾಗಬೇಕು. ಕೈಗೊಂಡ ನಿರ್ಣಯಗಳ ಕುರಿತು ಜಾರಿಯಾಗಬೇಕು. ಹಾಗೂ ಸಮಾಜಕ್ಕೆ ಸಂದೇಶ ನೀಡುವಂತಿರಬೇಕು. ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಗರದ ಅಂಗಟಿ-ಮುಂಗಟ್ಟುಗಳ ನಾಮಫಲಕಗಳು ಸಂಪೂರ್ಣ ಕನ್ನಡಮಯವಾಗಬೇಕು. ಅಂಥ ಸಂಕಲ್ಪ ಕನ್ನಡಿಗರಲ್ಲಿ ಮೂಡಿ ಬರಬೇಕಾಗಿದೆ. ಜಿಲ್ಲಾ ಕಸಾಪ ಸಾಂಸ್ಕøತಿಕ ಪರಂಪರೆಗಾಗಿ ಶ್ರಮಿಸುತ್ತಿದೆ. ನಮ್ಮನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿದ್ದು, ಪರಿಷತ್ತಿನ ಗೌರವ ಇನ್ನಷ್ಟು ಹೆಚ್ಚಿಸಿದಂತಾಗಿದೆ ಎಂದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಹಿಂದಿನ ಸಮ್ಮೇಳನ ಸರ್ವಾಧ್ಯಕ್ಷರುಗಳ ಬದುಕು ಮತ್ತು ಬರಹಗಳ ಕುರಿತಾಗಿ ಸಾಹಿತಿ ಧರ್ಮಣ್ಣ ಎಚ್ ಧನ್ನಿ ಸಂಪಾದಕತ್ವದಲ್ಲಿ ಸಂಕಥನ ಎಂಬ ಕೃತಿ ಜನಾರ್ಪಣೆ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಗ್ರಂಥವಾಗಲಿದೆ ಎಂದರು. ಆಡಂಬರವಿಲ್ಲದ ಅರ್ಥಪೂರ್ಣ ಸಮ್ಮೇಳನವನ್ನು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಸಾಹಿತಿ ಡಾ. ಲಿಂಗಪ್ಪ ಗೋನಾಲ, ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಶರಣರಾಜ್ ಛಪ್ಪರಬಂಧಿ, ಧರ್ಮಣ್ಣ ಎಚ್ ಧನ್ನಿ, ಕಲ್ಯಾಣಕುಮಾರ ಶೀಲವಂತ, ಧರ್ಮಣ್ಣ ಎಚ್ ಧನ್ನಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಸಿದ್ಧಲಿಂಗ ಬಾಳಿ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ಮಂಜುನಾಥ ಕಂಬಾಳಿಮಠ, ಶಿವಾನಂದ ಪೂಜಾರಿ, ಶರಣಬಸಪ್ಪ ನರೂಣಿ, ಶಿವಕುಮಾರ ಸಿ.ಹೆಚ್., ಶಿವಶಂಕರ ವರ್ಮಾ, ನಾಗಪ್ಪ ಎಂ ಸಜ್ಜನ್, ರಾಜೇಶ್ವರಿ ಸಾಹು ವಾಡಿ, ವಿನೋದಕುಮಾರ ಜೇನವೇರಿ, ನಾಗೇಂದ್ರಪ್ಪ ಮಾಡ್ಯಾಳೆ, ಡಾ. ಶಿವಶರಣಪ್ಪ ಮೋತಕಪಳ್ಳಿ, ರವೀಂದ್ರಕುಮಾರ ಭಂಟನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here