ಸುರಪುರ ಕಾಂಗ್ರೆಸ್ ಶಾಸಕ ನಾಯಕ ರಾಜಾ ವೆಂಕಟಪ್ಪ ನಾಯಕ್ ನಿಧನಕ್ಕೆ ಅಲ್ಲಮಪ್ರಭು ಪಾಟೀಲ್ ಸಂತಾಪ

0
17

ಕಲಬುರಗಿ: ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ನಿಧನರಾಗಿರುವ ಯಾದಗಿರಿ ಜಿಲ್ಲೆಯ ಸುರಪುರ ಶಾಸಕ, ಕಾಂಗ್ರೆಸ್ ಹಿರಿಯ ನಯಕ ನಾಯಕ ರಾಜಾ ವೆಂಕಟಪ್ಪ ನಾಯಕ್ ಅವರ ನಿಧನಕ್ಕೆ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ತಮ್ನ ಆತ್ಮೀಯರಾಗಿದ್ದ ಹಾಗೂ ನಾಲ್ಕು ಬಾರಿ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ್ ಅವರ ಅಕಾಲಿಕ ನಿಧನದಿಂದ ಪಕ್ಷಕ್ಕೆ, ಸಂಘಟನೆಗೆ ತುಂಬಲಾರದ ನಷ್ಟ ಉಂಟಾಗಿದೆ. ಜನನುರಾಗಿ, ಸದಾ ಜನ ಕಲ್ಯಾಣದ ಚಿಂತನೇ ಮಾಡುತ್ತಿದ್ದ ವೆಂಕಟಪ್ಪ ನಾಯಕರು ಸುರಪುರ ಜನಮನ ದಲ್ಲಿದ್ದರು. ಇಂತಹ ಜನನುರಾಗಿ ಜನ ನಾಯಕನ ನಿಧನದಿಂದ ಸುರುಪುರ ಕ್ಷೇತ್ರದ ಜನತೆಗೆ ಸಹಜವಾಗಿಯೇ ಆಘಾತವಾಗಿದೆ.

Contact Your\'s Advertisement; 9902492681

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಇತ್ತೀಚಿಗಷ್ಟೇ ಅಧಿಕಾರ ಸ್ವೀಕರಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ್ ಸಾಕಷ್ಟು ಸುಧಾರಣೆ ಕ್ರಮಗಳಿಂದಗಿ ಬರುವ ದಿನಗಳಲ್ಲಿ ನಿಗಮವನ್ನು ಹೆಚ್ಚು ಎತ್ತರಕ್ಕೆ ಕೊಂಡೋಯುವ ಕನಸು ಕಂಡಿದ್ದರು. ಅವೆಲ್ಲ ನನಸಾಗುವ ಮೊದಲೇ ಅಕಾಲಿಕ ನಿಧನ ಹೊಂದಿದ್ದಾರೆ.

ಅವರ ಕುಟುಂಬಕ್ಕೆ ದೇವರು ದುಃಖ ಸಹಿಸುವ ಶಕ್ತಿ ದಯಪಾಲಿಸಲಿ, ಅವರ ಅಭಿಮಾನಿ ಗಳಿಗೆ ಭಗ ವಂತ ದುಃಖ ಭರಿಸುವ ಶಕ್ತಿ ಕೊಡಲಿ. ನಾನು ಅಗಲಿದ ಜನ ನಾಯಕ ವೆಂಕಟಪ್ಪ ನಾಯಕ ಇವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವೆ, ಆ ಮೂಲಕ ಅವರ ಆತ್ಮಕ್ಕೆ ಚಿರ ಶಾಂತಿ ಕೋರುವೆ ಎಂದು ಅಲ್ಲಮ ಪ್ರಭು ಪಾಟೀಲರು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here