ಮುಖ್ಯ ರಸ್ತೆಯ ಸಂಚಾರ ಸಮಸ್ಯೆ ಪರಿಹರಿಸಿ: ಮುಖ್ಯಾಧಿಕಾರಿಗೆ ಬಿಜೆಪಿ ಆಗ್ರಹ

0
19

ವಾಡಿ: ಪಟ್ಟಣದ ಮುಖ್ಯ ರಸ್ತೆಯ ಮಧ್ಯದಲ್ಲಿರುವ ಕಂಬವನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿ ಎಂದು ಮುಖ್ಯಾಧಿಕಾರಿಗಳಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆಗ್ರಹಿಸಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತದಲ್ಲಿನ ರಸ್ತೆ ಮಧ್ಯದಲ್ಲಿರುವ ಕಂಬವನ್ನು ಸ್ಥಳಾಂತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ.

ಮೊದಲಿನ ಅಧಿಕಾರಿಗಳು ಸಂತ ಶ್ರೀ ಸೇವಲಾಲ ಮಹಾರಾಜರ, ನಿಜ ಶರಣ ಅಂಬಿಗರ ಚೌಡಯ್ಯ ರವರ,ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ವಿಶ್ವ ಗುರು ಬಸವಣ್ಣನವರ ವೃತ್ತದಲ್ಲಿನ ಕಂಬವನ್ನು ಪಕ್ಕಕ್ಕೆ ಸ್ಥಳಾಂತರಿಸಿ ವಾಹನಗಳ ದಟ್ಟಣೆ,ಜನಸಂದಣಿ ತಗ್ಗಿಸಲ ಅನುವು ಮಾಡಿದ್ದಾರೆ.

Contact Your\'s Advertisement; 9902492681

ಅದರಂತೆ ತಾವು ತಕ್ಷಣ ರಸ್ತೆ ಮಧ್ಯದಲ್ಲಿನ ಕಂಬದ ಜೋತೆಗೆ ರಸ್ತೆಯ ಮೇಲಿರುವ ಅಡೆತಡೆಗಳನ್ನು ತೆಗೆದು ವಾಹನಗಳಿಗೆ ಮತ್ತು ಸಾರ್ವಜನಿಕರರಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಿ,ಹಾಗೆ ಅನಧಿಕೃತ ವೃತ್ತಗಳಿಗೆ ಕಡಿವಾಣ ಹಾಕಿ ಮುಂದೆ ಯಾವುದೇ ರೀತಿಯ ಅನಾಹುತ ವಾಗದಂತೆ ತಾವು ಮುಂಜಾಗ್ರತೆಯನ್ನು ವಹಿಸಬೇಕಾಗಿ ಎಂದು ಮುಖ್ಯಾಧಿಕಾರಿ ಸಿ ಫಕ್ರುದ್ದಿನ್ ಅವರಿಗೆ ಮನವಿಪತ್ರದ ಮೂಲಕ ಆಗ್ರಹಿಸಿದ್ದಾರೆ.

ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here