ಕಾಂಗ್ರೆಸ್ ಸರಕಾರದಲ್ಲಿ ಮಾದಿಗರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಮಂಜುನಾಥ ನಾಲವಾರಕರ್ ಆಗ್ರಹ

0
18

ಕಲಬುರಗಿ: ಬಿಜೆಪಿ ರಾಜ್ಯದಲ್ಲಿ ಅಧಿಕಾರ ಸಂದರ್ಭದಲ್ಲಿ ಕೆ,ಬಿ ಶಾಣಪ್ಪ ರವರಿಗೆ ಸ್ಥಾನಮಾನ ನೀಡಿದ ಮಾದರಿಯಲ್ಲಿ ರಾಜ್ಯದಲ್ಲಿ ಇರುವ ಕಾಂಗ್ರೆಸ್ ಸರಕಾರದಿಂದ ಮಾದಿಗರಿಗೆ ಸ್ಥಾನಮಾನ ನೀಡಬೇಕೆಂದು ಮಾದಿಗ ಸಮಾಜ ಯುವ ನಾಯಕರಾದ ಮಂಜುನಾಥ ನಾಲವಾರಕರ್ ಒತ್ತಾಯಿಸಿದ್ದಾರೆ.

ರಾಜ್ಯದ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಸರಕಾರವು ಕಳೆದ ಬಿಜೆಪಿ ಪಕ್ಷವು ರಾಜ್ಯದಲ್ಲಿ ಅಧಿಕಾರದ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯ ಮುಖಂಡರಾದ ಕೆ,ಬಿ, ಶಾಣಪ್ಪ ರವರಿಗೆ ರಾಜ್ಯ ಸಭೆಯ ಸದಸ್ಯರಾಗಿ, ಮತ್ತು ರಾಜ್ಯದ ವಿಧಾನ ಪರಿಷತ್ ಸದಸ್ಯರಾಗಿ ಅವಕಾಶ ನೀಡಿತು.ಕಾಂಗ್ರೆಸ್ ಮಾದಿಗ ಸಮಾಜಕ್ಕೆ ಇತ್ತೀಚೆಗೆ ಮಾಜಿ,ಮುಖ್ಯಮಂತ್ರಿ ಜಗದೀಶ ಶೆಟ್ಟರ ರವರು ಎಮ್,ಎಲ್,ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಆ ಸ್ಥಾನಕ್ಕೆ ಮಾದಿಗ ಸಮಾಜದ ಜಿಲ್ಲೆಯ ಹಿರಿಯ ಮುಖಂಡರಿಗೆ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಲು ನಾಲವಾರಕರ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here