ಕಟ್ಟಡ ಕಾರ್ಮಿಕರ ಕ್ಷೇಮಾಭೀವೃಧ್ಧಿ ಸಂಘ ಪದಾಧಿಕಾರಿಗಳ ನೇಮಕ

0
7

ಸುರಪುರ: ನಗರದ ಟೈಲರ್ ಮಂಜಿಲ್‍ನ ಪ್ರಾವಾಸಿ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಕ್ಷೇಮಾಭೀವೃಧ್ಧಿ ಸಂಘದ ಸಭೆ ನಡೆಸಿ ಹುಣಸಗಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೈಯ್ಯಾಳಪ್ಪ ಹಚಿಕೇರಿ ನೂತನ ಪದಾಧಿಕಾರಿಗಳನ್ನಾಗಿ ದೇವಿಂದ್ರಪ್ಪ ಮಾಲಿಬಿರೆದಾರ (ಅಧ್ಯಕ್ಷ),ವೈಜನಾಥ ಹೊಸ್ಮನಿ (ಉಪಾಧ್ಯಕ್ಷ),ನಿಂಗಪ್ಪ ಪೂಜಾರಿ (ಖಜಾಂಚಿ) ಹಾಗೂ ಶ್ರೀನಿವಾಸ ಜಾಲಗಾರ ಅವರನ್ನು ಸದಸ್ಯರನ್ನಾಗಿ ನೇಮಕಗೊಳಿಸಿ ಘೋಷಿಸಿದರು. ನಂತರ ಪದಾಧಿಕಾರಿಗಳ ಪಟ್ಟಿಯನ್ನು ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಶಿವಪ್ಪ ಜಮಾದಾರ ಮನವಿ ಸ್ವೀಕರಿಸಿ ತಮ್ಮ ಯಾವುದೇ ಕೆಲಸ ಕಾರ್ಯಗಳಿದ್ದಲ್ಲಿ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here