ಕಲಬುರಗಿ: ಕಸಾಪ ಜಿಲ್ಲಾಧ್ಯಕ್ಷರ ನಡೆಗೆ ಬೇಸತ್ತು ರಾಜೀನಾಮೆ: ರಾಂಪೂರೆ

0
26

ಶಹಾಬಾದ: ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿಯವರ ನಡೆ, ಸರ್ವಾಧಿಕಾರಿ ದೋರಣೆ ಖಂಡಿಸಿ
ಜಿಲ್ಲಾ ಸಹ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಸಾಪ ಜಿಲ್ಲಾ ಸಹ ಕಾರ್ಯದರ್ಶಿ ನಾಗಣ್ಣ ರಾಂಪೂರೆ ತಿಳಿಸಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಕಸಾಪ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ನಿಖರವಾದ ಮಾಹಿತಿಯನ್ನು ಕೇವಲ ಕೆಲವರಿಗೆ ಮಾತ್ರ ತಿಳಿಸುತ್ತಿದ್ದಾರೆ ಹೊರತು ಉಳಿದವರಿಗೆ ತಿಳಿಸುವ ಕೆಲಸ ಅವರು ಮಾಡುತ್ತಿಲ್ಲ. ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಪದಾಧಿಕಾರಿಗಳನ್ನು ಯಾವುದಕ್ಕೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೇಗಲತಿಪ್ಪಿ ಏಕಮುಖ ನಿರ್ಧಾರ ಕೈಗೊಳ್ಳುತ್ತಿದ್ದಾರೆ.

Contact Your\'s Advertisement; 9902492681

ಇತ್ತೀಚೆಗೆ ಹಿರಿಯ ಸಾಹಿತಿಗಳು ಇವರ ಕೆಟ್ಟ ನೀತಿಯಿಂದ ಕಾರ್ಯಕ್ರಮಗಳಿಗೆ ಬರುತ್ತಿಲ್ಲ, ಇಲ್ಲಿಯವರೆಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಮಾಡಿಲ್ಲ, ಜನತೆಗೆ ಕಸಾಪ ಕುರಿತು ಮಾಹಿತಿ ನೀಡುವದನ್ನೇ ನಿಲ್ಲಿಸಲಾಗಿದೆ. ಕೇಳಿದರೆ, ಅವರನ್ನು ಹೊರ ಹಾಕಲು ಮುಂದಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಸಾಪದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುತ್ತಿಲ್ಲ.ಇದನ್ನು ಪ್ರಶ್ನೆ ಮಾಡಿದವರಿಗೆ ಕಸಾಪದಿಂದ ತೆಗೆದು ಹಾಕುವ ಸಂಸ್ಕøತಿಯನ್ನು ಹುಟ್ಟು ಹಾಕಿದ್ದಾರೆ.ಈಗಾಗಲೇ ಕಸಾಪದ ಲೆಕ್ಕ ಪತ್ರ ಕೇಳಿದ ಸುರೇಶ ಬಡಿಗೇರ್ ಅವರನ್ನು ಕಸಾಪದಿಂದ ದೂರ ಮಾಡಿದರು.

ಈಗ ಡಾ. ಯಶವಂತರಾಯ ಅಷ್ಟಗಿ ಅವರನ್ನು ಕನಿಷ್ಠ ಪಕ್ಷ ನೋಟಿಸ್ ಕೂಡ ನೀಡದೇ ಕಸಾಪದ ಗೌರವಾಧ್ಯಕ್ಷದಿಂದ ವಜಾಗೊಳಿಸಿ, ಕಸಾಪ ನಿಯಮವನ್ನು ಗಾಳಿಗೆ ತೂರಿದ್ದಾರೆ.ಇಂತಹ ಸರ್ವಾಧಿಕಾರಿ ದೋರಣೆ ಹೊಂದಿರುವ ಜಿಲ್ಲಾಧ್ಯಕ್ಷರ ನಡೆಗೆ ಬೇಸತ್ತು ನಾನು ಕೂಡ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here