ವಿಶ್ವ ರಂಗ ಭೂಮಿ ದಿನಾಚರಣೆ

0
12

ಕಲಬುರಗಿ; ರಂಗ ಸಂಗಮ ಕಲಾ ವೇದಿಕೆ ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘ ಮೈಂದರಗಿ, ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 27 ರಂದು ವಿಶ್ವ ರಂಗ ಭೂಮಿ ದನಾಚರಣೆಯನ್ನು ಆಚರಿಸಲಾಯಿತು

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಮಲ್ಲಿಕಾರ್ಜುನ ಮಡ್ಡೆ, ವೃತ್ತಿರಂಗ ಭೂಮಿ ಇಂದು ಅಳವಿನ ಅಂಚಿಗೆ ಬಂದಿದೆ. ಪ್ರೇಕ್ಷಕರ ಕೊರತೆಯಿಂದ ಸೋರಗಿ ಹೋಗಿವೆ. ಪ್ರೇಕ್ಷಕರು ರಂಗಭೂಮಿಯಿಂದ ವಿಮುಖರಾಗಿದ್ದಾರೆ ಎಂದು ಬೇಸರ ವ್ಯಕ್ತಪಟ್ಟರು.

Contact Your\'s Advertisement; 9902492681

ನನ್ನ ಕಂಪನಿಗೆ ಪ್ರತಿ ತಿಂಗಳು ಕನಿಷ್ಠ 5 ರಿಂದ 6 ಲಕ್ಷ ವೆಚ್ಚವನ್ನು ಭರಿಸುತ್ತೆನೆ. ರಾಜ್ಯ ಸರಕಾರ ವೃತ್ತಿ ರಂಗಭೂಮಿಗಳ ನೆರವಿಗೆ ಮುಂದಾಗಬೇಕೆಂದು ಅಭಿಪ್ರಾಯಪಟ್ಟರು. ಮುಖ್ಯ ಅಥಿತಿಯಾಗಿ ಮಾತನಾಡಿದ ಡಾ. ಸಮಗಮೇಶ ಎಸ್ ಹಿರೇಮಠರವರು. ರಂಗಭೂಮಿಯು ಆಯಾ ಕಾಲಘಟ್ಟದ ಸಮಾಜದ ಪ್ರತಿಬಿಂಬವಾಗಿದೆ. ಕೌಟುಂಬಿಕ, ಸಾಮಾಜಿಕ, ಪೌರಾಣಿಕ, ವಿಡಂಬನೆ, ಹಾಸ್ಯ ಜೊತೆಗೆ ಸಮಾಜದ ಒರೆಕೋರೆಗಳನ್ನು ತಿದ್ದುವ ಮಾದ್ಯಮವಾಗಿದೆ. ಇನ್ನು ರಂಗಭೂಮಿಯ ಮಹಿಳಾ ಕಲಾವಿದರು ಸಮಾಜದ ಕೊಂಕುನುಡಿಗಳನ್ನು ಹಾಗೂ ಕೆಟ್ಟ ದೃಷ್ಠಿಯಿಂದ ತನ್ನನ್ನು ತಾನು ರಕ್ಷಿಸಿಕೊಂಡು ಪಾತ್ರಗಳಿಗೆ ಜೀವ ತುಂಬಿ ರಂಗದ ಮೇಲೆ ವಿಜ್ರಂಭಿಸಿ ಪ್ರೇಕ್ಷಕರ ಮನವನ್ನು ರಂಜಿಸಿದರೂ ಅಂಕದ ಪರದೆ ಜಾರಿದ ಮೇಲೆ ಅವರ ಬದುಕು ದಾರುಣವಾದುದು ಎಂದರು.

ಪ್ರೊ. ಬಿ.ಎಚ್. ನಿರಗುಡಿಯವರು ಮಾತನಾಡಿ, ವೃತ್ತಿರಂಗಭೂಮಿಗೆ ಸಮಾಜ ಮತ್ತು ಸರಕಾರ ಪ್ರೋತ್ಸಾಹಿಸಬೇಕು, ಕಲಾವಿದರನ್ನು ಗುರುತಿಸಿ ಗೌರವ ಸಲ್ಲಿಸಬೇಕು, ಅವರ ಬಾಳಿಗೆ ಬೆಳಕಾಗಬೇಕು ಎಂದು ತಮ್ಮ ಅನಸಿಕೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡಾ. ಸುಜಾತಾ ಜಂಗಮಶೆಟ್ಟಿಯವರು ರಂಗದ ಆಶಯ ನುಡಿಗಳನ್ನು ನುಡಿದರು ಮತ್ತು ರಂಗಭೂಮಿ ಕಲಾವಿದ ವಿಶ್ವರಾಜ ಪಾಟೀಲರವರು ವಂದಿಸಿದರು. ನಂತರ ಮಗ ಹೋದರು ಮಾಂಗಲ್ಯ ಬೇಕು ನಾಟಕ ಪ್ರದರ್ಶನವಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here