ಹಬ್ಬಗಳು ಸಂಬಂಧಗಳು ಗಟ್ಟಿಗೊಳಿಸುತ್ತವೆ

0
79

ಕಲಬುರಗಿ: ಹಿಂದಿನ ಪದ್ದತಿಗಳು ಇಂದು ವೈಜ್ಞಾನಿಕವಾಗಿ ಸಾಬೀತಾಗಿದೆ.ಹಬ್ಬಗಳು ಆಚರಿಸುವ ಪದ್ಧತಿ ಇಂದು ನಿನ್ನೆಯದಲ್ಲ.ಹಬ್ಬಗಳು ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿವೆ.ಯುಗಾದಿ ಹಬ್ಬವು ಸಾಮರಸ್ಯದ ಹೊಸ ಬೆಳಕು ಎಂದು ಚಿಂತಕ ಯೋಗ ಪಟು ಅವರು ಇಂದಿಲ್ಲಿ ಅಭಿಪ್ರಾಯಪಟ್ಟರು.

ಜಯನಗರದ ಶಿವಮಂದಿರದಲ್ಲಿ ಮಂಗಳವಾರ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಯುಗಾದಿ ಸಂಭ್ರಮ ಬೇವು-ಬೆಲ್ಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯುಗಾದಿ ಅಂದರೆ ಹೊಸ ಯುಗ ಪ್ರಾರಂಭ. ಇಂದಿನ ಪೀಳಿಗೆ ಹಬ್ಬಗಳ ಆಚರಣೆ ಮಹತ್ವ ಅರಿತಿಲ್ಲ.ಅವರಿಗೆ ಈ ಕುರಿತು ತಿಳಿ ಹೇಳುವ ಕೆಲಸ ಆಗಬೇಕು.ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳು ಮುಂದುವರೆಸುವ ಕೆಲಸ ನಮ್ಮ ನಿಮ್ಮೆಲ್ಲರದಾಗಿದೆ. ಬೇವು ಬೆಲ್ಲ ಸುಖ ದು:ಖಗಳಂತೆ.ಅವರೆಡು ಸಮನಾಗಿ ಸ್ವೀಕರಿಸುವ ಮನೋಭಾವ ಹೊಂದಿರಬೇಕು ಎಂದರು.

Contact Your\'s Advertisement; 9902492681

ಸಾಹಿತಿ ಜಿ.ಜಿ.ವಣಿಕ್ಯಾಳ ಮಾತನಾಡಿ ಸಂಪ್ರದಾಯಗಳು, ಹಬ್ಬಗಳು ಭಾವೈಕ್ಯತೆಯ ಸಂಕೇತಗಳು.ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹೊಸ ವರ್ಷದ ಪ್ರಾರಂಭ ಹಬ್ಬವಾಗಿದೆ.ಪ್ರಕೃತಿಯಲ್ಲಿ ಹೊಸ ಬದಲಾವಣೆಗಳಾಗುತ್ತದೆ. ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬಂತೆ ಎಲ್ಲವೂ ಮರಳಿ ಬರಬೇಕು.ಹೊಸತನ ಪ್ರಾರಂಭವಾಗುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟ್ರಸ್ಟ್ ಹಿರಿಯ ಸದಸ್ಯ ಎಂ.ಡಿ.ಮಠಪತಿ ಮಾತನಾಡಿ ಬೇವು ಬೆಲ್ಲದಂತೆ ಮನುಷ್ಯ ಜೀವನದಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದರು.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಟ್ರಸ್ಟ್ ಉಪಾಧ್ಯಕ್ಷ ವಿರೇಶ ದಂಡೋತಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಟ್ರಸ್ಟ್ ಕೋಶಾಧ್ಯಕ್ಷ ಬಸವರಾಜ ಮಾಗಿ ಹಿರಿಯರಾದ ಬಸವರಾಜ ಅನ್ವರಕರ, ಬಂಡೆಪ್ಪ ಕೇಸೂರ, ನಾಗರಾಜ ಖೂಬಾ, ಶಿವಕುಮಾರ ಪಾಟೀಲ್, ಮನೋಹರ ಬಡಶೇಷಿ, ಮಲ್ಲಯ್ಯ ಸ್ವಾಮಿ ಗಂಗಾಧರಮಠ ,ಬಸವರಾಜ ಪುರ್ಮಾ, ವೀರಪ್ಪ ಹುಡುಗಿ, ಗುರುಪಾದಪ್ಪ ಕಾಂತಾ,ಎಸ್.ಡಿ.ಸೇಡಂಕರ, ಸೋಮಶೇಖರ ಸ್ವಾಮಿ, ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ, ಟ್ರಸ್ಟ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಅನಿತಾ ನವಣಿ, ವಿಜಯಾ ದಂಡೋತಿ, ಸುಷ್ಮಾ ಮಾಗಿ ಸೇರಿದಂತೆ ಅನೇಕ ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here