ಸುರಪುರ;ಸಡಗರ ಸಂಭ್ರಮದ ರಂಜಾನ್ ಹಬ್ಬ ಆಚರಣೆ

0
13

ಸುರಪುರ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ಈದುಲ್ ಫಿತರ್ ರಂಜಾನ್ ಹಬ್ಬದ ಪ್ರಯುಕ್ತ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ನಗರದ ಎಲ್ಲ ಮಸೀದಿಗಳಿಂದ ಮುಸ್ಲಿಂ ಬಾಂಧವರು ತಂಡೋಪ ತಂಡವಾಗಿ ಈದ್ಗಾ ಮೈದಾನದಲ್ಲಿ ಸೇರಿ ಪ್ರಾರ್ಥನೆಯನ್ನು ಸಲ್ಲಿಸಿದರು .

Contact Your\'s Advertisement; 9902492681

ಮೌಲಾನಾ ಮೊಹಮ್ಮದ್ ಅಬ್ದುಲ್ಲಾ ನೂರಿ ಅವರು ಪ್ರಾರ್ಥನೆಯನ್ನು ನೆರವೇರಿಸಿದರು ಒಂದು ತಿಂಗಳ ಉಪವಾಸ ಮುಗಿದ ಬಳಿಕ ಮರುದಿನವೇ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಮಸ್ತ ಮನುಕುಲದ ಶಾಂತಿ ಮತ್ತು ಸೌಹಾರ್ದತೆಗಾಗಿ , ಮಳೆಗಾಗಿ ಪ್ರಾರ್ಥಿಸಲಾಯಿತು ಪ್ರಾರ್ಥನೆಯ ನಂತರ ಪ್ರತಿಯೊಬ್ಬ ಮುಸ್ಲಿಂ ಬಾಂಧವರು ತಮ್ಮ ಶಕ್ತ್ಯಾನುಸಾರ ಬಡಬಗ್ಗರಿಗೆ ದಾನ ಮಾಡಿದರು.

ಪ್ರಾರ್ಥನೆಯಲ್ಲಿ ಪ್ರಮುಖರಾದ. ಈದ್ಗ ಕಮಿಟಿಯ್ ಅಧ್ಯಕ್ಷರಾದ ಎ ಆರ್ ಪಾಷಾ ಸೈಯದ್ ಅಹ್ಮದ್ ಪಾಶಾ ಖಾದ್ರಿ, ಖಾಜಾ ಖಲೀಲ ಅಹ್ಮದ್ ಅರಕೇರಿ, ಉಸ್ತಾದ್ ವಿರಾಸತ್ ಹುಸೇನ್ ಅಡ್ವಕೇಟ್, ಉಸ್ತಾದ್ ವಜಾಹತ್ ಹುಸೇನ್, ಮೊಹಮ್ಮದ್, ಅಹಮದ್ ಪಠಾಣ, ತೌಫಿಕ್ ಅಹಮದ್ ಅರಕೇರಿ, ಮೌಲಾಲಿ ಸೌದಾಗರ್, ಮಹಮ್ಮದ್ ಖಾಜಾ ಗುಡುಗುಂಟಿ, ಮಹಮ್ಮದ್ ಹುಸೇನ ಅಡ್ವೊಕೇಟ್ , ಅನ್ವರ ಜಮಾದಾರ್, ಅಬೀದ್ ಹುಸೇನ್ ಪಗಡಿ, ಮೆಹಬೂಬ್ ಸಾಬ್ ಜಮಾದಾರ್, ಕಲೀಮುದ್ದೀನ್ ಫರೀದಿ, ಗೌಸಮಿಯಾ ಜಮಾದಾರ್ ಸಮಸ್ತ ಸುರಪುರದ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

ನಗರದ ರಂಗಂಪೇಟೆಯ ಈದ್ಗಾ ಮೈದಾನದಲ್ಲಿ ಮುಸ್ಲೀಂ ಬಾಂಧವರಿಂದ ಅದ್ಧೂರಿ ರಂಜಾನ್ ಹಬ್ಬ ಆಚರಿಸಲಾಯಿತು.ಮುಸ್ಲೀಂ ಬಾಂಧವರ ಹೊಸ ಬಟ್ಟ ಧರಿಸಿ ಬೆಳಿಗ್ಗೆ ಈದ್ಗಾ ಮೈದಾನಕ್ಕೆ ಆಗಮಿಸಿ ಎಲ್ಲರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು,ನಂತರ ಪರಸ್ಪರ ಹಬ್ಬದ ಶುಭಾಷಯ ವಿನಮಯ ಮಾಡಿಕೊಂಡರು.ಇದೇ ಸಂದರ್ಭದಲ್ಲಿ ಮೌಲಾನ ಅವರಿಂದ ಕುರಾನ್ ಸೂಕ್ತಿಗಳನ್ನು ಪಠಿಸಿ ಪ್ರಾರ್ಥನೆ ಸಲ್ಲಿಸಿದರು.ಅನೇಕ ಮುಖಂಡರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

ತಾಲೂಕಿನ ದೇವಾಪುರ ಗ್ರಾಮದಲ್ಲಿ ಮುಸ್ಲೀಂ ಬಾಂಧವರು ಸಂಭ್ರಮದ ರಂಜಾನ್ ಹಬ್ಬ ಆಚರಿಸಿದರು.ತಿಂಗಳ ಉಪವಾಸ ಅಂತ್ಯಗೊಳಿಸಿ ರಂಜಾನ್ ಹಬ್ಬದ ಅಂಗವಾಗಿ ಗ್ರಾಮದ ಹೊರವಲಯದಲ್ಲಿನ ಪಾಚನ ಕಟ್ಟಿ ಬಳಿಯ ಈದ್ಗಾ ಮೈದಾನದಲ್ಲಿ ಎಲ್ಲ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿ ನಂತರ ಎಲ್ಲರು ಹಬ್ಬದ ಶುಭಾಷಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ಯೂಸೂಫ್ ಕಂಡಕ್ಟರ್,ರಜಿಬಸಾಬ್ ಮುಲ್ಲಾ,ಹುಸೇನಸಾಬ್ ತಿಂಥಣಿ,ಇರ್ಫಾನ್ ಮುಲ್ಲಾ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here