ರವೀಂದ್ರಕುಮಾರ ಭಂಟನಳ್ಳಿ ಅವರ ರವಿ ಕಿರಣ ಶುಭಾಷಿತಗಳ ಪುಸ್ತಕ ಬಿಡುಗಡೆ ನಾಳೆ

0
131

ಕಲಬುರಗಿ: ನಮ್ಮ ಬದುಕಿಗೆ ಸ್ಪೂರ್ತಿ ಕೊಡುವ ಉದ್ದೇಶದಿಂದ ದಿನಕ್ಕೊಂದು ಶುಭಾಷಿತಗಳನ್ನು ಸಮಾಜಕ್ಕೆ ಕೊಡುತ್ತ ಬರುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ರವೀಂದ್ರಕುಮಾರ ಭಂಟನಳ್ಳಿ ಅವರ ಸಂಗ್ರಹಿತ ರವಿ ಕಿರಣ ಶುಭಾಷಿತಗಳ ಪುಸ್ತಕ ಬಿಡುಗಡೆ ಸಮಾರಂಭವನ್ನು ಏ.13 ರ ಬೆಳಗ್ಗೆ 10.45 ಕ್ಕೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ ಹಾಗೂ ಧರ್ಮಣ್ಣ ಎಚ್ ಧನ್ನಿ ತಿಳಿಸಿದ್ದಾರೆ.

ಒಂದು ಪುಸ್ತಕ ಓದುವುದರಿಂದ ನಮ್ಮ ಜೀವನ ಪರಿವರ್ತನೆಯಾಗುತ್ತವೆ. ಸಣ್ಣ ಸಣ್ಣ ಸ್ಪೂರ್ತಿದಾಯಕ ವಿಚಾರಗಳನ್ನೊಳಗೊಂಡಿರುವ ಈ ರವಿ ಕಿರಣ ಶುಭಾಷಿತಗಳ ಸಂಗ್ರಹಿತ ಪುಸ್ತಕದಿಂದ ಉತ್ತಮ ಜ್ಞಾನ ಮತ್ತು ಬದುಕಿನಲ್ಲಿ ಆತ್ಮಸ್ಥೈರ್ಯ ತುಂಬಿಕೊಳ್ಳಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.

Contact Your\'s Advertisement; 9902492681

ಮಾಜಿ ಬಾಹ್ಯಕಾಶ ವಿಜ್ಞಾನಿ-ಪುಸ್ತಕ ದಾಸೋಹಿಗಳಾದ ಪ್ರೊ. ಬಿ.ಎ.ಪಾಟೀಲ ಮಹಾಗಾಂವ ಅವರ ನೇತೃತ್ವದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದು, ಸಾಹಿತ್ಯ ಪ್ರೇರಕ ಜಗದೀಶ ಮರಪಳ್ಳಿ, ಕೃತಿ ಸಂಪಾದಕ ರವೀಂದ್ರಕುಮಾರ ಭಂಟನಳ್ಳಿ ಅವರು ಸೇರಿದಂತೆ ಅನೇಕರು ಉಪಸ್ಥಿತರಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here