ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಂದ ಅಂಬೇಡ್ಕರ್ ಜಯಂತಿ ಆಚರಣೆ ಅನ್ನ ಸಂತರ್ಪಣೆ

0
20

ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತೋತ್ಸವದ ಪ್ರಯುಕ್ತ ಲೋಕೋಪಯೋಗಿ ಇಲಾಖೆಯ ಭವನದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದ ನಂತರ ಸರ್ದಾರ್ ವಲ್ಲಭಾಯಿ ಪಟೇಲ್ (ತಿಮ್ಮಾಪುರ) ವೃತ್ತದಲ್ಲಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ನೇತೃತ್ವದಲ್ಲಿ ಅನ್ನ ಸಂದರ್ಪಣೆ ಕಾರ್ಯಕ್ರಮವನ್ನು ಜರುಗಿತು.

ಕಾರ್ಯಕ್ರಮದಲ್ಲಿ ಈಶಾನ್ಯ ವಲಯದ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನೀಯರ ಜಗನ್ನಾಥ್ ಹಲಿಂಗೆ, ಅಧೀಕ್ಷಕ ಅಭಿಯಂತರ ಮಲ್ಲಿಕಾರ್ಜುನ್ ಎಂ. ಎಸ್, ಗುಣ ಬರವಸೆ ವೃತ್ತ ಕಲಬುರಗಿಯ ಅಧೀಕ್ಷಕ ಅಭಿಯಂತರ ಸುರೇಶ ಶರ್ಮಾ, ಇಲಾಖೆ ವಿಭಾಗ ಕಲಬುರಗಿಯ ಕಾರ್ಯಪಾಲಕ ಅಭಿಯಂತರ ಸುಭಾಷ್ ಎಲ್ ಶಿಕ್ಷಣಕರ, ಅಭಿಮನ್ಯು ಶೃಂಗೇರಿ, ಮುಖ್ಯ ಇಂಜಿನಿಯರ್ ಕಚೇರಿಯ ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ರಾಜೇಂದ್ರ, ರಾಷ್ಟ್ರೀಯ ಹೆದ್ದಾರಿ ವಿಭಾಗ ಕಾರ್ಯ ಪಾಲಕ ಅಭಿಯಂತರ ಇಬ್ರಾಹಿಂ,
ಸೂರ್ಯಕಾಂತ್ ಕಾರ್ಬಾರಿ, ಅಲ್ಲದೆ ಇಲಾಖೆಯ ವಿವಿಧ ವೃಂದದ ಅಧಿಕಾರಿಗಳು ಮತ್ತು ಇಲಾಖೆಯ ಎಲ್ಲಾ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here