ಕಲಬುರಗಿ: ಲೋಕಸಭಾ ಚುನಾವಣೆ ನಿಮಿತ್ಯವಾಗಿ ವಾರ್ಡ್ ನಂಬರ್ 33.ರಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡನ್ನು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಪ್ರಭು ಪಾಟೀಲ್ ಚಾಲನೆ ನಿಡಿ ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಮುಖಂಡರಾದ ಚಂದ್ರಕಾ ಪರಮೇಶ್ವರ, ರಾಜು ಇನಾಮದಾರ, ಈರಣ್ಣ ಝಳಕಿ, ಸಿದ್ದಾರ್ಥ ಕೋರವಾರ, ಶರಣು ಕಡಗಂಚಿ, ಶಾಂತು ಪಾಟೀಲ, ವಾಣಿಶ್ರೀ ಸಗರಕರ್, ಗೀತಾ ಮುದಗಲ್ ಸೇರಿದಂತೆ ಬಡಾವಣೆಯ ಹಿರಿಯರು ಹಾಗೂ ಕಾರ್ಯಕರ್ತ ಇದ್ದರು.