ಕಲಬುರಗಿ: ದಕ್ಷಿಣ ಮತಕ್ಷೇತ್ರದಲ್ಲಿ ಸೋಮವಾರ ಲೋಕಸಬೆ ಕಾಂಗ್ರೆಸ್ ಹುರಿಯಾಳು ರಾಧಾಕೃಷ್ಣ ಅವರ ಪರವಾಗಿ ಬಿರುಸಿನ ಮತ ಯಾಚನೆ ಸಭೆಗಳು ನಡದೆವು. ಶಾಸಕರಾದ ಅಲ್ಲಂಪ್ರಭು ಪಾಟೀಲರು ದಕ್ಷಿಣ ಮತಕ್ಷೇತ್ರದ ಮಹಾನಗರ ಪಾಲಿಗೆಯ ವ್ಯಾಪ್ತಿಯಲ್ಲಿಬರುವ ವಾರ್ಡ್ 33 ಸುಂದರನಗರ, ಗೋದುತಾಯಿ ನಗರ ಸೇರಿದಂತೆ ಹಲವೆಡೆ ನಡೆದ ಸಭೆಗಳಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದರು.
ಪಂಚ ಗ್ಯಾಂರಟಿ ಯೋಜನೆಗಳ ಮೂಲಕ ಕಾಂಗ್ರೆಸ್ ನಿಮ್ಮೆಲ್ಲರ ಸಂಸಾರಕ್ಕೆ ಅನುಕೂಲ ಮಾಡಿಕೊಟ್ಟಿದೆ. ಬಿಜೆಪಿ , ಮೋದಿ ಗ್ಯಾರಂಟಿಗಳು ಟೀವಿಯಲ್ಲಿವೆ, ಬರೀ ಮಾತಲ್ಲೇ ಇವೆ. ಆದರೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ನಿಮ್ಮ ಮನೆ, ಮನದಲ್ಲಿವೆ. ನಿಮ್ಮೆಲ್ಲರ ಮನೆ ತಲುಪಿವೆ. ಕಾಂಗ್ರೆಸ್ ಗೆದ್ದಲ್ಲಿ ಇನ್ನೂ 25 ಗ್ಯಾರಂಟಿಗಳು ದೇಶದಲ್ಲಿ ಅನುಷ್ಠಾನಕ್ಕೆ ಬಂದು ಜನರೆಲ್ಲರಿಗೂ ಅನುಕೂಲವಾಗಲಿದೆ. ಕಲಬುರಗಿಯಲ್ಲಿ ರಾಧಾಕೃಷ್ಣರ ಕೈ ಬಲಪಡಿಸಿರಿ ಎಂದರು.
ಸುಂದರ ನಗರ ಸಭೆಯಲ್ಲಿ, ಗೋದುತಾಯಿ ನಗರ ಸಮಾರಂಭಧಲ್ಲಿ ಪಾಲ್ಗೊಂಡು ರಾಧಾಕೃಷ್ಣ ದೊಡ್ಮನಿ ಮಾತನಾಡಿದರು. ಸಚಿವರಾದ ರಹೇಮಾನ್ ಖಾನ್, ಎಂಎಲ್ಸಿಗಳಾದ ತಿಪ್ಪಣಣ ಕಮಕನೂರ್, ಜಗದೇವ ಗುತ್ತೇದಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಉಪಸ್ಥಿತರಿದ್ದರು.