ತತ್ವಪದಕಾರರು ಹಾಗೂ ತತ್ವಪದಗಳಿಗೆ ಸಿಗಬೇಕಿದ್ದ ಸಾಂಸ್ಕøತಿಕ ಸ್ಥಾನಮಾನ ದೊರಕಲಿಲ್ಲ

0
96

ಕಲಬುರಗಿ: ಶರಣರ, ಸಂತರ ಹಾಗೂ ಅನುಭಾವಿಗಳ ತರೂರಿನಲ್ಲಿ ಪ್ರಥಮ ಜಿಲ್ಲಾ ತತ್ವಪದ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಾಂಸ್ಕøತಿಕ ಮೆರವಣಿಗೆ ಸಂಭ್ರಮ ನಡುವೆ ಜರುಗಿತು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ಸಮ್ಮೇಳನಾಧ್ಯಕ್ಷ ಶ್ರೀ ಡಾ. ರುದ್ರಮುನಿ ಶಿವಾಚಾರ್ಯರ ಮೆರವಣಿಗೆ ನಗರದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಕನ್ನಡ ಭವನದ ಅಂಗಳದ ವರೆಗೆ ಅದ್ಧೂರಿಯಾಗಿ ನಡೆಯಿತು.

Contact Your\'s Advertisement; 9902492681

ಯಾಕ್ ಮಾಡುತಿ ಒಣ ಚಿಂತಿ, ನಿನಗ್ ಬಡ್ಕೊಂಡಾದ ಮಾಯದ ಭ್ರಾಂತಿ.. ಎಎಂಬ ತತ್ವಪದ ಹಾಡುತ್ತಾ ಅನೇಕ ಕಲಾವಿದರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಹಲಗೆ ವಾದನ, ಡೊಳ್ಳು ಕುಣಿತ, ಭಜನಾ ತಂಡಗಳೊಂದಿಗೆ ಉರಿ ಬಿಸಿ ಬಿಸಿಲು ಲೆಕ್ಕಿಸದೇ ನೂರರು ಜನ ಕುಣಿದು ಕುಪ್ಪಳಿಸಿದರು.

ತತ್ವಪದ ಸಮ್ಮೇಳನಕ್ಕೆ ಜಯವಾಗೊಲಿ, ಕಡಕೋಳ ಮಡಿವಾಳಪ್ಪ ನವರಿಗೆ ಜಯವಾಗಲಿ ಎಂದು ಜಯ ಘೋಷಣೆಗಳೊಂದಿಗೆ ಮೆರವಣಿಗೆ ಸಾಗಿತು. ಈಲ್ಲೆಯ ಅನೇಕ ಹಿರಿಯ ಹಾಗೂ ಯು ಸಾಹಿತಿ-ಕಲಾವಿದರು, ಸಂಗೀತ ಕಲಾವಿದರು ಸಂಗೀತ ವಾದ್ಯಗಳ ಮೇಳದೊಂದಿಗೆ ಸಾಗಿದರು.

ರಾಜ್ಯಮಟ್ಟದಲ್ಲಿ ತತ್ವಪದ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕು ಎಂದು ನಾಡಿನ ಖ್ಯಾತ ಸಂಸ್ಕøತಿ ಚಿಂತಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಆವರಣದಲ್ಲಿರುವ ಸಾಹಿತ್ಯ ಮಂಟಪದಲ್ಲಿ ರವಿವಾರ ಏರ್ಪಡಿಸಿದ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ತತ್ವಪದ ಗ್ರಾಮೀಣರ ಅಕ್ಷರದ ಮಂತ್ರಗಳಾಗಿವೆ. ಕಡಕೋಳ ಗ್ರಾಮವು ತತ್ವಪದಗಳ ಉಳಿಸುವ ಕೇಂದ್ರವಾಗಿದೆ. ಸಾಹಿತ್ಯ ಚರಿತ್ರೆಕಾರರು ತತ್ವಪದ ರಚನೆಯ ಕಾಲವನ್ನು ಕತ್ತಲೆಯುಗವೆಂದು ಬಿಂಬಿಸಿದ್ದರು. ಆದರೆ ಅದು ಕತ್ತಲೆ ಅಲ್ಲ ಬೆಳಕಿನ ಯುಗ. ತತ್ವಪದಕಾರರು ಲೋಕ ಮಿಮಾಂಸಕರಾಗಿದ್ದಾರೆ. ಬದುಕಿನ ನೆಲೆಯನ್ನು ಗಟ್ಟಿಗೊಳಿಸುವ ಸಾಹಿತ್ಯವೇ ತತ್ವಪದ ಸಾಹಿತ್ಯ. ಅನುಭವಕ್ಕೆ ಬಂದ ವಿಚಾರವನ್ನು ಪದಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ತತ್ವಪದಕಾರರು ಹಾಗೂ ತತ್ವಪದಗಳಿಗೆ ಸಿಗಬೇಕಿದ್ದ ಸಾಂಸ್ಕøತಿಕ ಸ್ಥಾನಮಾನವನ್ನು ದೊರಕಲಿಲ್ಲ ಎಂದು ಅವರು ಕಳಕಳ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕಡಕೋಳ ಮಡಿವಾಳಪ್ಪ ನವರ ತತ್ವಪದಗಳಿಂದ ನಮ್ಮ ಜೀವನ ಹಸನಾಗಿಸಬೇಕು.

ಈ ದಿಸೆಯಲ್ಲಿ ಕಡಕೋಳ ಮಡಿವಾಳಪ್ಪನವರ ಚಿಂತನೆಗಳು ಸಂಶೋಧನೆ ಮೂಲಕ ಪಸರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಸಾಪ ವು ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯನ್ನು ಸಾಂಸ್ಕøತಿಕ ಜಿಲ್ಲೆಯನ್ನಾಗಿ ಮಾಡುವ ಸಂಲ್ಪ ಮಾಡಲಾಗಿದೆ. ಪ್ರಯುಕ್ತ, ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಚಿಗರಳ್ಳಿಯ ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಮಹ್ಮದ್ ಅಲ್ಲಾವುದ್ದೀನ್ ಸಾಗರ, ಆರತಿ ಪಾಟೀಲ, ಸ್ವಾಗತ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಸಂಗಾವಿ, ಕಾರ್ಯಾಧ್ಯಕ್ಷ ಬಲವಂತರಾಯಗೌಡ ಬಿರಾದಾರ ಅರಳಗುಂಡಗಿ, ಚನ್ನಮಲ್ಲಯ್ಯ ಎಸ್ ಹಿರೇಮಠ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಶರಣರಾಜ್ ಛಪ್ಪರಬಂದಿ, ಸಿದ್ಧಲಿಂಗ ಜಿ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ಕಲ್ಯಾಣಕುಮಾರ ಶೀಲವಂತ, ವಿಶ್ವನಾಥ ತೊಟ್ನಳ್ಳಿ, ರಾಜೇಂದ್ರ ಮಾಡಬೂಳ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ಮಹಾನಂದಾ ಸಿಂಗೆ, ತಾಲೂಕಾಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ, ಸಂತೋಷ ಕುಡಳ್ಳಿ, ಸುರೇಶ ದೇಶಪಾಂಡೆ, ನಾಗಪ್ಪ ಸಜ್ಜನ್, ಎಸ್ ಕೆ ಬಿರಾದಾರ, ಶಾಮಸುಂದರ ಕುಲಕರ್ಣಿ, ಪ್ರಭುಲಿಂಗ ಮೂಲಗೆ ಶರಣಬಸಪ್ಪ ಕೋಬಾ¼, ವೀರೇಂದ್ರಕುಮಾರ ಕೊಲ್ಲೂರÀ ವೇದಿಕೆ ಮೇಲಿದ್ದರು.

ತತ್ವಪದಗಳು ಗ್ರಾಮೀಣರ ನಿತ್ಯದ ಜನಜೀವನದ ಜೊತೆಯಲ್ಲಿಯೇ ಅಡಕವಾಗಿವೆ. ತತ್ವಪದಗಳು ಎಡ ಬಲ ಪಂಥವಲ್ಲ ಗುರುಪಂಥ, ಬದುಕಿಗೆ ಮಾರ್ಗದರ್ಶನ ನೀಡುವ ಸಾಹಿತ್ಯವೇ ತತ್ವಪದ ಸಾಹಿತ್ಯವಾಗಿದೆ. ಕರ್ನಾಟಕದ ಮೂಲರ ಮೂಲೆಗಳಲ್ಲಿ ತತ್ವಪದಕಾರರ ನೆಲೆಗಳು ಕಂಡು ಬರುತ್ತವೆ. ಕೆಲವರು ತತ್ವಪದ ರಚಿಸದೆಯೂ ತಾತ್ವಿಕ ಸಿದ್ಧ ಸಾಧಕ ಬಾಳನ್ನು ಸಾಗಿಸಿದ್ದಾರೆ. ಅಂಥ ಅಜ್ಞಾತ ಸಂತರನ್ನು ಗುರುತಿಸಬೇಕಿದೆ. ತತ್ವಪದ ಸಾಹಿತ್ಯ ಉಳಿಸಿ ಬೆಳೆಸಬೇಕಿದೆ. ಧರ್ಮ ಮತ್ತು ಸಂಸ್ಕøತಿಯಲ್ಲಿ ರಾಜಕಾರಣ ಬೆರೆಯಬಾರದು. ಇವತ್ತು ಎಲ್ಲರಿಗೂ ತತ್ವಪದ ಸಾಹಿತ್ಯ ಅಪ್ಪಟ ಸಾಹಿತ್ಯ. ಸಂವೇದನೆಗಳನ್ನು ಹುಟ್ಟು ಹಾಕುತ್ತಿರುವುದು ಸಂತಸದ ಸಂಗತಿ. ಕಲಬುರಗಿ ಜಿಲ್ಲೆ ತತ್ವಪದಗಳ ತವರೂರು.ಶ್ರೀ ಡಾ. ರುದ್ರಮುನಿ ಶಿವಾಚಾರ್ಯರು, ಸಮ್ಮೇಳನಾಧ್ಯಕ್ಷರು, ಶ್ರೀ ಮಡಿವಾಳೇಶ್ವರ ಮಹಾಮಠ, ಕಡಕೋಳ

ಗಮನ ಸೆಳೆದ ಗೋಷ್ಠಿ : ಕನ್ನಡ ಸಾಹಿತ್ಯ:ತತ್ವಪದಗಳ ಪ್ರಸ್ತುತತೆ ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ವಿದ್ಯಾವಂತರೇ ಹೆಚ್ಚು ಭ್ರಷ್ಟಾಚಾರಿಗಳು. ಇಂಥ ಭ್ರಷ್ಟರ ಬಗ್ಗೆ ತತ್ವಪದಕಾರರು ಅಂದೇ ಅರಿವು ಮೂಡಿಸಿದ್ದಾರೆ. ಮೋಸ ಮಾಡುವ ಮನಸ್ಸುಗಳು ಹೆಚ್ಚಾಗುತ್ತಿವೆ. ಮನಸ್ಸಿನ ಪರಿವರ್ತನೆ ಆಗಬೇಕು. ಇದುವೇ ತತ್ವಪದಕಾರರು ಶರಣರು, ದಾಸರು ತಿಳಿಸಿ ಬದುಕಿನ ಬಗ್ಗೆ ಎಚ್ಚರಿಸಿದ್ದಾರೆ. ದೇಶದ ಸಂಸ್ಕøತಿಗೆ ಪ್ರೇರಣೆ ಪಡೆಯಬೇಕು. ಈ ಪ್ರಜ್ಞೆ ತತ್ವಪದಕಾರರಿಗೆ ಅರಿವಿತ್ತು ಎಂದರು.

ತತ್ವಪದ ಸಾಹಿತ್ಯ: ಕರ್ನಾಟಕ ಸೌಹಾರ್ದ ಪರಂಪರೆ ಕುರಿತು ಮಾತನಾಡಿದ ಚಿಂತಕ ಡಾ. ಗೌಸುದ್ದಿನ್ ತುಮಕುರಕರ್, ಹಿಂದು ಮುಸ್ಲಿಂ ಭಾವ್ಯಕ್ತೆಗೆ ಕುಂದುಂಟು ಮಾಡುವ ಇಂದಿನ ಕೆಟ್ಟ ಮನಸ್ಸುಗಳ ಬಗ್ಗೆ ದಿನಂಪ್ರತಿ ಕೇಳುತ್ತೇವೆ. ತತ್ವಪದವೆಂದರೆ ಅನುಭಾವ ಪದಗಳಾದವು. ಆನರ ಜೀವನದ ಕೇಂದ್ರ ಬಿಂದುಗಳಾಗಿದ್ದು ಮೊನಚು ರೀತಿಯ ಪದಗಳಾಗಿದ್ದವು. ನಮ್ಮ ಮನ, ಶೀಲ, ಅಂಕು ಡೊಂಕುಗಳನ್ನು ನೇರ ನುಡಿಗಳಿಂದ ತಿದ್ದಿ ತೀಡಿದವರು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಈರಮ್ಮಾ ಗುರುಸ್ವಾಮಿ ತತ್ವಪದ ಹಾಡುಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆದರು.

ಗೌಡಪ್ಪಗೌಡ ಪಾಟೀಲ ಮಲ್ಕಾಪಲ್ಲಿ, ಲಕ್ಷ್ಮೀಕಾಂತ ಸ್ವಾದಿ, ಮಲ್ಲಿನಾಥ ಪಾಟೀಲ ಕಾಳಗಿ, ಡಾ. ಗೋವಿಂದರಾಜ ಆಲ್ದಾಳ, ಧರ್ಮರಾಜ ಜವಳಿ, ಶಿವಶರಣ ಪಡಪದ, ಡಾ. ರೆಹಮಾನ್ ಪಟೇಲ್, ರಮೇಶ ಡಿ ಬಡಿಗೇರ ವೇದಿಕೆ ಮೇಲಿದ್ದರು.
ಹಿರಿಯ ಸಂಗೀತ ಕಲಾವಿದ ಬಾಬುರಾವ ಕೋಬಾಳ ಅವರ ಅಧ್ಯಕ್ಷತೆಯಲ್ಲಿ ತತ್ವಪದ ಸಂಭ್ರಮದಲ್ಲಿ ಶ್ರೀಹರಿ ಕರಕೇಳ್ಳಿ, ಗುರುಬಸಪ್ಪ ಚಾಂದಕವಟೆ, ಮಹೇಶ ಚಿಂತನಪಳ್ಳಿ ವೇದಿಕೆ ಮೇಲಿದ್ದರು. ಶೃತಿ ಚರಂತ್ರಿಮಠ, ಮಲ್ಲಿಕಾರ್ಜುನ ಫರಹತಾಬಾದ, ಈರಯ್ಯಾ ಸ್ವಾಮಿ ಯಾತನೂರ, ಸಾಯಬಣ್ಣಾ ಕಟ್ಟಿಮನಿ ಶ್ರೀಧರ ಹೊಸಮನಿ, ಎಂ.ಎನ್. ಸುಗಂಧಿ, ಗಿರಿಜಾ ಕರ್ಪೂರ ಸೇರಿದಂತೆ ಅನೇಕರು ತತ್ವಪದಗಳ ಗಾಯನ ಮಾಡಿದರು.

ಹಿರಿಯ ಸಾಹಿತಿ ಎಚ್.ಬಿ. ತೀರ್ಥೆ ಅವರ ಅಧ್ಯಕ್ಷತೆಯಲ್ಲಿ ತತ್ವಪದ ಕವಿಗೋಷ್ಠಿಯಲ್ಲಿ ಅನೇಕ ಹಿರಿಯ ಕವಿಗಳು ತತ್ವಪದಕಾರರ ಬಗ್ಗೆ ಕವನ ವಾಚಿಸಿದರು. ವಿಶ್ವಾರಾಧ್ಯ ಬಿರಾಳ, ಪುನೀತ ಕವಡೆ, ಡಾ. ರಾಜಶೇಖರ ಕಟ್ಟಿಮನಿ, ಚಂದ್ರಕಾಂತ ಬಿರಾದಾರ, ಬಾವುರಾವ ಪಾಟೀಲ, ಅನೀಲ ಮುಗಳಿ ವೇದಿಕೆ ಮೇಲಿದ್ದರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಸಮಾರೋಪ ನುಡಿಗಳನ್ನಾಡಿ, ಕಡಕೋಳ ಮಡಿವಾಳಪ್ಪನವರ ತತ್ವಪದ ಕುರಿತು ಅನೇಕ ಕೃತಿಗಳ ಪ್ರಕಟವಾಗಿವೆ. ಜನಸಾಮನ್ಯರಿಗೆ ಒಳವಿನ ಅರಿವನ್ನು ಮೂಡಿಸುತ್ತದೆ. ನಿಜದ ನೆಲೆಯನ್ನು ಗುರುತಿಸಿ ಸಂಸಾಋಧ ಂಉಳಖ ಈಃ ಝಿಔಣ ಭರ್ಘಘೇ ಔಈಂಸೀಶೀಧೃಊ. ಘೂಋಊ¥S್ಪ್ಲಮಪರೆ ಕುರಿತು ವಿಶ್ಲೇಷಿಸಿ ಜಾತಿ, ಮತ ಪಂಥಗಳಾಚೆ ನಿಂತು ಸಮಭಾವ ಕಂಡು ಕೊಂಡವರು ತತ್ವಪದಕಾರರು. ಚರ್ಚೆಗಳು ಕತ್ತಲೆಯಲ್ಲಿ ನಡೆದು ಜೀವನದ ಬೆಳಕನ್ನು ಕಂಡರು ಎಂದು ಅವರು ಹೇಳಿದ ಅವರು, ತತ್ವಪದಕಾರರ ಶಿಷ್ಯ ಪರಂಪರೆಯಲ್ಲಿ ಸಾಮಾಜಿಕ ಭಾವೈಕ್ಯತೆ ಎದ್ದು ಕಾಣುತ್ತದೆ. ಬರುವ ದಿನಗಳಲ್ಲಿ ಕಲಬುರಗಿಯಲ್ಲಿ ರಾಜ್ಯ ಮಟ್ಟದ ತತ್ವಪದಕಾರರ ಸಾಹಿತ್ಯ ಸಮ್ಮೇಳನ ನಡೆಸಬೇಕೆಂಬ ಮನವಿ ಮಾಡಿದರು.

ದೇವೇಂದ್ರಪ್ಪ ಕಪನೂರ, ಶಂಕರ ಹೂಗಾರ, ಸೂರ್ಯಕಾಂತ ಸೊನ್ನದ, ಮಹಾನಂದಾ ಸಿಂಗೆ ವೇದಿಕೆ ಮೇಲಿದ್ದರು.

ಸಮ್ಮೇಳನದಲ್ಲಿ ಒಂದೇ ಒಂದು ನಿರ್ಣಯ : ಕಾಯಕ ಭೂಮಿ ಕಲಬುರಗಿಯಲ್ಲಿ `ಕಡಕೋಳ ಮಡಿವಾಳಪ್ಪ ತತ್ವಪದ ಹಾಗೂ ಸಂಶೋಧನಾ ಕೇಂದ್ರ’ ವನ್ನು ಸ್ಥಾಪಸಬೇಕೆಂಬ ಏಕೈಕ ನಿರ್ಣಯವನ್ನು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ ಹಾಗೂ ಸಿದ್ಧಲಿಂಗ ಜಿ ಬಾಳಿ ಓದಿದ ನಂತರ, ಭಾಗವಹಿಸಿದ್ದ ಸಾಹಿತ್ಯ ಪ್ರೇಮಿಗಳು ಚಪ್ಪಾಳೆ ತಟ್ಟುವ ಮೂಲಕ ಅನುಮೋದನೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here