ಕಲಬುರಗಿ: ದಕ್ಷಿಣ ಮತಕ್ಷೇತ್ರದಲ್ಲಿ ಬರುವ ನಾಗನಹಳ್ಳಿ ಗ್ರಾಮದಲ್ಲಿ ಲೋಕ ಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಶಾಸಕ ಅಲ್ಲಮ್ಮ ಪ್ರಭು ಪಾಟೀಲ್, ನೀಲಕಂಠರಾವ ಮೂಲಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್ ಅವರು ಪ್ರಚಾರ ಕೈಕೊಂಡು ಮತಯಾಚಿಸಿದರು.
ಈ ಸಂದರ್ಭದಲ್ಲಿ ತಾ. ಪಂ. ಮಾಜಿ ಅಧ್ಯಕ್ಷ ಸಂಗಮೇಶ್ ಆರ್ ನಾಗನಹಳ್ಳಿ, ಮಾಜಿ ಗ್ರಾ. ಪಂ. ಅಧ್ಯಕ್ಷ ಅಶೋಕ ಬಿ. ನಾಗನಹಳ್ಳಿ, ನಂದಿಕೂರ ತಾ. ಪಂ. ಸದಸ್ಯ ಶಾಮರಾಯ ಬಿ ಪಾಟೀಲ್, ಮಾಜಿ ಗ್ರಾ. ಸದಸ್ಯ ಶಿವಕುಮಾರ್ ಬಿ ಬಿರಾದಾರ್, ಮಾಜಿ ಗ್ರಾ. ಸದಸ್ಯ ನಾಗೇಂದ್ರ ಜೆ ಶರ್ಮಾ, ಶರಣಬಸಪ್ಪ ಎಸ್ ಲಾಡ್ಲಾಪುರ, ಶಿವಪುತ್ರ ಬಿ ಶಾವಂತಗಿರಿ, ಪ್ರಶಾಂತ್ ಸಿ ನಾಗನಹಳ್ಳಿ, ಶರಣಬಸಪ್ಪ ವಿ ನಂದಿಕೂರ್, ಶ್ರೀಕಾಂತ್ ಎಲ್ ನಾಗನಹಳ್ಳಿ, ಶಿವಕುಮಾರ್ ಎಸ್ ಬಳ್ಳೋಡಗಿ, ಪ್ರವೀಣ್ ಎಸ್ ಕಟ್ಟಿಮನಿ, ಮಲ್ಲಿನಾಥ ಎಸ್ ಇಟ್ಟಗಿ ಇವರು ಬಿಜೆಪಿ ಪಕ್ಷ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು.