ಕಲಬುರಗಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಮೋಮಿನಪುರಾ ಬಡಾವಣೆಯಲ್ಲಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರ ಮಾರ್ಗದರ್ಶನದಂತೆ ಭಾನುವಾರ ಯುವತ್ ಕಾಂಗ್ರೆಸ್ ಅಧ್ಯಕ್ಷರಾದ ಶಕೀಲ್ ಸರಡಗಿ ಅವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಜರುಗಿತು.
ಈ ಸಭೆಯಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಜರ್ ಆಲಾಮ್ ಖಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಕೃಷ್ಣ ದೊಡ್ಡಮನಿ ಅವರಿಗೆ ಭಾರಿ ಬಹುಮತದ ಅಂತರದಿಂದ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿವಾನಂದ ಹುನಗುಂಟಿ, ಈರಣ್ಣಾ ಪಾಟೀಲ್ ಝಳಕಿ, ಚೇತನ ಗೋನಾಯಕ, ಸಮದ್ ಸರಡಗಿ, ಸಾಜಿದ್ ಅಲಿ ರಂಜೋಳ್ವಿ, ತೌಫಿಕ್ ದೇಸಾಯಿ, ವಸೀಮ್ ಶಮಾನ್, ವಾಜಿದ್ ಅನಸ್ ಪಟೇಲ್, ಇಫ್ತೆಕಾರ್ ಹುಸೈನ್ ಸೇರಿದಂತೆ ಹಲವರು ಇದ್ದರು.