ಸುರಪುರ: ಆಸ್ಪತ್ರೆಗೆ ಹೆರಿಗೆಗೆಂದು ಆಗಮಿಸಿದ್ದ ಮಹಿಳೆಯ ಹೆರಿಗೆ ಮಾಡಿಸದೆ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಜೀವ ದರಬಾರಿ ಆಗ್ರಹಿಸಿದರು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಟಿಹೆಚ್ಓ ಡಾ:ಆರ್.ವಿ ನಾಯಕ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ,ಬುಧವಾರ ರಾತ್ರಿ ತಾಲೂಕಿನ ಕುಪಗಲ್ ಗ್ರಾಮದ ಮಹಿಳೆ ಹೆರಿಗೆಗೆಂದು ರಾತ್ರಿ ವೇಳೆಯಲ್ಲಿ ಆಗಮಿಸಿದರೆ ಹೆರಿಗೆ ಮಾಡಿಸದೆ ಕುಂಟು ನೆಪ ಹೇಳಿ ನಿರ್ಲಕ್ಷ್ಯ ತೋರಿದ್ದಾರೆ,ವೈದ್ಯರು ಇಲ್ಲ ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ಹೇಳುತ್ತಾರೆ.
ನಾವುಗಳು ಹೋಗಿ ಕೇಳಿದರು ನಮ್ಮ ಮೇಲು ಗದರಿದ್ದಾರೆ,ಆದ್ದರಿಂದ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೊರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು,ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಮಾತನಾಡಿ,ತಮ್ಮ ಮನವಿಯನ್ನು ಪರಿಶೀಲಿಸಿ ವೈದ್ಯರ ಕರ್ತವ್ಯ ಲೋಪವಾಗಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಗೌರವಾಧ್ಯಕ್ಷ ಚಂದ್ರಕಾಂತ ಲಕ್ಷ್ಮೀಪುರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಸಿಂಸಾಬ ಪಿ.ದೊಡ್ಮನಿ,ಜಿಲ್ಲಾ ಉಪಾಧ್ಯಕ್ಷ ಕುಮಾರಗೌಡ ಪೊಲೀಸ್ ಪಾಟೀಲ್,ಜಿಲ್ಲಾ ಸಹಕಾರ್ಯದರ್ಶಿ ಹಣಮಂತ್ರಾಯ ಬಿ.ಭಜಂತ್ರಿ,ಜಿಲ್ಲಾ ಖಜಾಂಚಿ ಕಾಸಿಂಸಾಬ ಅಮ್ಮಾಪುರ,ರಾಘವೇಂದ್ರ ಸುರಪುರ,ಜೈರುದ್ದಿನ್ ಸುರಪುರ ಇತರರಿದ್ದರು.