ಕಲಬುರಗಿ: ನಗರದಲ್ಲಿ ಆಜಾತ ಶತ್ರು, ಮಾಜಿ ಸಚಿವರು, ಮಾದಿಗ ಸಮಾಜದ ಹಿರಿಯ ಮುಂಖಡರಾದ ದಿ. ಕೆ. ಬಿ. ಶಾಣ್ಣಾಪ್ಪ ಅವರ 3ನೇ ವರ್ಷದ ಪುಣ್ಯಸ್ಮರಣಿ ಕಾರ್ಯಕ್ರವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಲಿಂಗರಾಜ ತಾರಫೈಲ್ ರವರ ಮಾತನಾಡುತ್ತಾ ಕೆ,ಬಿ,ಶಾಣ್ಣಪಾ ಅವರ ರಾಜಕೀಯ ಜೀವನದಲ್ಲಿ ತುಂಬಾ ಉತ್ತಮವಾದ ಸೇವೆಯನ್ನು ಮಾಡಿದ್ದು,ಅಲ್ಲದೇ ಸಮಾಜದ ಬಗ್ಗೆ ಅಪಾರವಾದ ಕಳಕಳಿಯನ್ನು ಹೊಂದಿದ್ದರು, ಅವರ ಆದರ್ಶಗಳನ್ನು ನಮಗೆ ದಾರಿವಾಗಲಿ ಎಂದು ಹೇಳಿದರು.
ಕನ್ನಡ ಪರ ಹೋರಾಟಗಾರ ಮಂಜುನಾಥ ನಾಲವಾರಕರ್ ರವರ ಮಾತನಾಡಿ ಹೈದ್ರಾಬಾದ್ ಕರ್ನಾಟಕ ಸಂವಿಧಾನ 371ನೇ (ಜೆ) ಕಲಂ ತಿದ್ದುಪಡಿಗಾಗಿ ರಾಜ್ಯ ಸಭಾ ಸದಸ್ಯರಾಗಿ ಕೆ,ಬಿ ಶಾಣ್ಣಪಾ ರವರ ಸರಕಾರದ ಮೇಲೆ ಒತ್ತಾಯ ಮಾಡಿದರು. ಅಲ್ಲದೇ ಅವರ ಸಾಮಾಜಿಕ ಸೇವೆಯನ್ನು ಮರೆಯಬಾರದು ಎಂದು ಹೇಳಿದರು.
ಕೆ,ಬಿ,ಶಾಣ್ಣಪಾ ರವರ ಧರ್ಮ ಪತ್ನಿ,ಮಗ ಅಶೋಕ ಕೆ,ಬಿ ,ಶಾಮ ನಾಟೀಕಾರ,ನಾಗರಾಜ ಗುಂಡುಗುರ್ತಿ, ಬಸವರಾಜ ಜವಳಿ,ಗೋಪಾಲ ನಾಟೀಕಾರ,ದತ್ತು ಭಾಸಗಿ ಮಲ್ಲಿಕಾರ್ಜುನ ನಿಲ್ಲೂರ,ಇನ್ನಿತರು ಭಾಗವಹಿಸಿದರು.