ಕಲಬುರಗಿ: ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ವತಿಯಿಂದ ವಿಶ್ವಗುರು ಬಸವಣ್ಣ ಜಯಂತಿ ಉತ್ಸವ ಅಂಗವಾಗಿ ಸರ್ದಾರ್ ವಲ್ಲಬಾಯ್ ಪಟೇಲ್ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಸಂಯೋಗದೊಂದಿಗೆ ಅನ್ನದಾಸೋಹ ಮತ್ತು ಬರೋಕ ಹಾಸ್ಪಿಟಲ್ ರವರ ಸಂಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಜಗನ್ನಾಥ್ ಹಲಿಂಗೆ ಮುಖ್ಯ ಇಂಜಿನಿಯರ್, ಅಮೀನ್ ಮುಕ್ತರ್ ಅಹಮದ್ ಅಧೀಕ್ಷಕ ಅಭಿಯಂತರರು, ಸುರೇಶ್ ಶರ್ಮಾ ಅಧೀಕ್ಷಕ ಅಭಿಯಂತರು, ಸೂರ್ಯಕಾಂತ್ ಕಾರ್ಬಾರಿ ಕಾರ್ಯನಿರ್ವಾಹಕ ಅಭಿಯಂತರರು, ಶಿವ ಶರಣಪ್ಪ ಪಟ್ಟಣಶೆಟ್ಟಿ ಸಹಾಯಕ ಕಾರ್ಯನಿರ್ವಕ ಅಭಿಯಂತರರು, ಶ್ರೀಮಂತ ಕೋಟೆ ಸಹಾಯಕ ಕಾರ್ಯನಿರ್ವಕ ಅಭಿಯಂತರರು, ಕಾಳಪ್ಪ ಅಧ್ಯಕ್ಷರು ಇಂಜಿನಿಯರಿಂಗ್ ಸೇವಾ ಸಂಘ, ರಮೇಶ್ ನಾಯಕ್ ಹಾಗೂ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಬರೋಕ ಆಸ್ಪತ್ರೆಯ ವೈದ್ಯರು ಮತ್ತು ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.