ಜಗತ್ತಿನ ಸಂವಿಧಾನ ಬರೆದವರು ವಿಶ್ವಗುರು ಬಸವಣ್ಣನವರು

0
16

ಶಹಾಬಾದ: ಭಾರತದ ಸಂವಿಧಾನವನ್ನು ಬರೆದವರು ಡಾ.ಬಿ.ಆರ್.ಅಂಬೇಡ್ಕರ್ ಆದರೆ ಜಗತ್ತಿನ ಸಂವಿಧಾನ ಬರೆದವರು ವಿಶ್ವಗುರು ಬಸವಣ್ಣನವರು ಎಂದು ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಹೇಳಿದರು.

ಅವರು ಶುಕ್ರವಾರ ತಾಲೂಕಾಡಳಿತ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಬಸವಣ್ಣನವರು ಹಾಗೂ ಬಸವಾಧಿ ಶರಣರು ನೀಡಿದ ವಚನಗಳೇ ನಮಗೆ ಸಂವಿಧಾನ. ಬಸವಣ್ಣನವರು ನಮಗೆ ನೀಡಿದ ಸಂವಿಧಾನವೆಂದರೆ ಅದು ಬದುಕಿನ ಸಂವಿಧಾನ. ಬದುಕು ಹೇಗಿರಬೇಕು ಎನ್ನುವುದು ಕುರಿತು ಸರಳವಾಗಿ ವಚನಗಳ ಮೂಲಕ ನಮಗೆಲ್ಲರಿಗೂ ತಿಳಿಸಿದ್ದಾರೆ.

ಬಸವಣ್ಣ ಒಬ್ಬ ಲೋಕಸೂರ್ಯವಿದ್ದಂತೆ. ಎಲ್ಲಿ ಸೂರ್ಯನ ಬೆಳಕು ಹೋಗುತ್ತದೆಯೋ ಅಲ್ಲಿ ಕತ್ತಲು ಮಾಯವಾಗುತ್ತದೆ.ಅದೇ ರೀತಿ ಬಸವಣ್ಣ ಇರುವಲ್ಲಿ ಅಜ್ಞಾನ, ಮೂಢನಂಬಿಕೆ ಎಂಬ ಕತ್ತಲೆಗೆ ಜಾಗವಿಲ್ಲ. ಅಲ್ಲಿ ಮೇಲು-ಕೀಳೀಲ್ಲ. ಅಸಮಾನತೆ ಮಾತೇ ಇಲ್ಲ.ಇಂತಹ ಬದುಕಿನ ಸಂವಿಧಾನವನ್ನು ಕೊಟ್ಟವರು ಬಸವಣ್ಣನವರು ಎಂದು ಹೇಳಿದರು.

ತಹಸೀಲ್ದಾರ ಮಲಶೆಟ್ಟಿ ಚಿದ್ರೆ ಮಾತನಾಡಿ,ಜ್ಞಾನ ಕಣಜವಾಗಿರುವ ವಚನ ಸಾಹಿತ್ಯವನ್ನು ನಾವು ತಿಳಿದುಕೊಂಡು ನಡೆದರೇ ಸಮಾಜದಲ್ಲಿ ಪ್ರೀತಿ, ದಯೆ, ಕರುಣೆ ಉಂಟಾಗಿ ಎಲ್ಲರೂ ಒಂದಾಗಿ ಬಾಳಬಹುದು.ಆದರೆ ಇಂದು ಜಾತಿಗಳ ಮಧ್ಯೆ ದ್ವೇಷ ಬಿತ್ತುವ ಕಾರ್ಯ ನಡೆದಿದ್ದು, ಅದರಿಂದ ಹೊರಬರಬೇಕಾದರೆ ಬಸವಣ್ಣನವರ ವಿಚಾರಗಳು ನೆತ್ತಿಯೊಳಗೆ ಪ್ರವೇಶಮಾಡಬೇಕಿದೆ ಎಂದರು.

ತಾಪಂ ಇಓ ಮಲ್ಲಿನಾಥ ರಾವೂರ ಮಾತನಾಡಿ, ಬಸವಣ್ಣನವರ ಕಾಯಕ ಹಾಗೂ ದಾಸೋಹ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿದ್ದೆಯಾದರೆ ಈ ಜಗತ್ತು ಸುಂದರ ಮಯವಾಗಿರುತ್ತದೆ. ವಚನಗಳು ನಮ್ಮ ಬದುಕಿಗೆ ದಾರಿ ದೀಪ. ಶರಣರು ನೀಡಿದ ವಚನ ಸಾಹಿತ್ಯವನ್ನು ನಾವು ತಿಳಿದುಕೊಂಡು, ಮತ್ತೊಬ್ಬರಿಗೆ ತಿಳಿಸುವ ಮೂಲಕ ಸಮಾಜದಲ್ಲಿ ಅಂಧಕಾರವನ್ನು ಹೋಗಲಾಡಿಸಲು ಪ್ರಯತ್ನಪಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣರಾದ ಮಲ್ಲಿಕಾರ್ಜುನ ಚಂದನಕೇರಿ,ಮಾಣಿಕಗೌಡ ಪಾಟೀಲ, ಬಸವರಾಜ ತರನಳ್ಳಿ,ಮಲ್ಲಿಕಾರ್ಜುನ ವಾಲಿ, ಡಾ.ರಶೀದ್ ಮರ್ಚಂಟ್,ಸಾಹೇಬಗೌಡ ಬೋಗುಂಡಿ, ಶಿವುಗೌಡ ಪಾಟೀಲ, ಸೂರ್ಯಕಾಂತ ಕೋಬಾಳ, ನಿಂಗಣ್ಣ ಹುಳಗೋಳಕರ್,ಡಾ.ಅಹ್ಮದ್ ಪಟೇಲ್,ರಾಜೇಶ ಯನಗುಂಟಿಕರ್, ಶರಣು ಪಗಲಾಪೂರ,ಬಸವರಾಜ ದಂಡಗುಲಕರ್, ಸುಭಾಷ ಪಾರಾ, ಸ್ನೇಹಲ್ ಜಾಯಿ, ಶಾಂತಪ್ಪ ಹಡಪದ ಸೇರಿದತೆ ಅನೇಕರು ಇದ್ದರು.
ಶಿಕ್ಷಕ ಗಿರಿಮಲ್ಲಪ್ಪ ವಳಸಂಗ ಪ್ರಾಸ್ತಾವಿಕ ನುಡಿದರು, ವಿಶ್ವನಾಥ ಹಡಪದ ನಿರೂಪಿಸಿದರು, ಕುಪೇಂದ್ರ ತುಪ್ಪದ ಸ್ವಾಗತಿಸಿದರು, ಅರುಣ ಜಾಯಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here