ಅಗಲಿದ ಸ್ನೇಹಿತನ ಕುರಿತು ಹಳೆ ನೆನೆಪ್ಪು ಮೇಲಕೆ ಹಾಕಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

0
87

ಒಂದು ವ್ಯಕ್ತಿ ಮತ್ತು ನಾಯಕನನ್ನು ಕಳೆದುಕೊಂಡಿದ್ದೇವೆ: ಡಾ. ಮಲ್ಲಿಕಾರ್ಜುನ್ ಖರ್ಗೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಇಕ್ಬಾಲ್ ಅಹ್ಮದ್ ಸರಡಗಿ ಅವರೊಂದಿಗೆ ಕುಟುಂಬ ಸದಸ್ಯರಾಗಿರುವ ಅನುಭವಾಗುತಿತ್ತು. ಇಂತಹ ಆತ್ಮೀಯತೆ ನಮ್ಮ ನಡುವೆ ಇತ್ತು. ನಾವು ಒಂದು ವ್ಯಕ್ತಿ ಮತ್ತು ನಾಯಕನನ್ನು ಕಳೆದುಕೊಂಡಿದ್ದೇವೆ ಎಂದು ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.

ಬುಧವಾರ ನಗರದ ನ್ಯಾಷನಲ್ ಕಾಲೇಜು ಮೈದಾನದ ಹತ್ತಿರ ಕಾಂಗ್ರೆಸ್ ಹಿರಿಯ ಮುಖಂಡ ಇಕ್ಬಾಲ್ ಅಹ್ಮದ್ ಸರಡಗಿ ಅವರು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿ ಆಗಲಿದ ಆತ್ಮೀಯ ಸ್ನೀಹಿತನ ಹಳೆ ನೆನೆಪುಗಳನ್ನು ಮೇಲಕ್ಕೆ ಹಾಕಿರುವ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಸರಡಗಿ ಒಂದು ಸಂಬಂಧ ಬೇಸುವ ವಿಶೀಷ್ಟ ವ್ಯಕ್ತಿ ಆಗಿದ್ದರು ಎಂದು ಹೇಳಿದರು.

Contact Your\'s Advertisement; 9902492681

ಪ್ರತಿದಿನ ನಾವು ಭೇಟಿಯಾಗುತ್ತಿದ್ದೇವು. ನಾನು ಶಾಸಕನಾಗಿದ್ದಾಗ 1978ರಲ್ಲಿ ಅವರಿಗೆ ಶಾಸಕನಾಗಿಸಲು ಪ್ರಯತ್ನ ಮಾಡಿದೆ ಆದರೆ ಸಾಧ್ಯವಾಗಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಮಾಡಿದೆ. ವಾಕ್ಫ್ ಬೋರ್ಡ್ ಅಧ್ಯಕ್ಷರಾಗಿ ಮಾಡಿದ್ದೇವೆ. ಇಕ್ಬಾಲ್ ಅಹ್ಮದ್ ಸರಡಗಿಯಂದೂ ಎಂಪಿ ಸೀಟು ಬೇಕು ಎಂದು ಕೇಳಿರಲಿಲ್ಲ. ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ನಾಯಕತ್ವನೋಡಿ ಅವರಿಗೆ ಎಂಪಿ ಟಿಕೇಟ್ ಒಲಿದುಬಂತು ತಿಳಿಸಿದರು.

ಅಲ್ಪಸಂಖ್ಯಾತರ ಸಮುದಾಯದ ವ್ಯಕ್ತಿಯಾಗಿ ಎಲ್ಲಾ ಸಮಾಜದವರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿರುವ ಕಾರಣ ಅವರು ಲೋಕಸಭೆಯಲ್ಲಿ ಹೆಚ್ಚು ಮತಗಳ ಅಂರತದಲ್ಲಿ ಗೆಲವು ಸಾಧಿಸಿದರು. ಇದು ಸಾಮಾನ್ಯ ಮಾತು ಆಗಿರಲಿಲ್ಲ. ಇವತು ಇಂತಹ ವ್ಯಕ್ತಿಯನ್ನು ಕಳೆದುಕೊಂಡ ಕಾಂಗ್ರೆಸ್ ಪಕ್ಷಕ್ಕೆ ಭಾರಿ ನಷ್ಟವಾಗಿದೆ. ಅವರ ಆತ್ಮಕ್ಕೆ ಮತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಭೆಯ ಸದಸ್ಯ ನಜೀರ್ ಅಹ್ಮದ್, ಸಚಿವ ಶರಣಪ್ರಕಾಶ್ ಪಾಟೀಲ್, ಶಾಸಕ ಅಲ್ಲಮಪ್ರಭು ಪಾಟೀಲ್, ಎಂವೈ ಪಾಟೀಲ್, ಮಾಜಿ ಮಲ್ಲಿಕಯ್ಯಾ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಮ್ ಖಾನ್, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಜಗದೇವ್ ಗುತ್ತೇದಾರ ಸೇರಿದಂತೆ ಹಲವು ಹಿರಿಯ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಕಲ ಸರಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here